Thursday | June 11, 2026 |

ಏಪ್ರಿಲ್‌-ಜೂನ್ ತ್ರೈಮಾಸಿಕದಲ್ಲಿ 10,000 ಕೋಟಿ ಸಾಲ; ಆರ್‍‌ಬಿಐಗೆ ಮಾಹಿತಿ ಒದಗಿಸಿದ ಸರ್ಕಾರ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೇ  ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ 10,000 ಕೋಟಿ ರು. ಸಾಲ ಎತ್ತಲು ಹೊರಟಿದೆ. ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮಾಹಿತಿ ನೀಡಿದೆ.

 

ಈ ಕುರಿತು  ಭಾರತೀಯ ರಿಸರ್ವ್‌ ಬ್ಯಾಂಕ್‌ 2024ರ ಮಾರ್ಚ್‌ 28ರಂದು ಹೇಳಿಕೆ ಬಿಡುಗಡೆ ಮಾಡಿದೆ.

 

ಕಳೆದ ಎಂಟು ತಿಂಗಳಲ್ಲಿ ಸಾರ್ವಜನಿಕ ಸಾಲವಾಗಿ   32,289 ಕೋಟಿ ರು.ಗಳನ್ನು  ಎತ್ತಿತ್ತು. ಅಲ್ಲದೇ  ಭಾರತೀಯ ರಿಸರ್ವ್‌ ಬ್ಯಾಂಕ್‌ ಮೂಲಕ ಮುಕ್ತ ಮಾರುಕಟ್ಟೆಯಿಂದ ಕೊನೆಯ  ತ್ರೈಮಾಸಿಕದಲ್ಲಿ (2023-24)  58,000 ಕೋಟಿ ರು‌.  ಎತ್ತುವಳಿ ಮಾಡಿತ್ತು. ಇದೀಗ  ಇದೇ ತ್ರೈಮಾಸಿಕದಲ್ಲಿ ಒಟ್ಟಾರೆ 10,000 ಕೋಟಿ ರು.ಗಳನ್ನು ಎತ್ತುವಳಿ ಮಾಡಲು ಹೊರಟಿರುವುದು ಮುನ್ನೆಲೆಗೆ ಬಂದಿದೆ. ಆರ್ಥಿಕ ವರ್ಷದ ಆರಂಭದ ಮೂರು ತಿಂಗಳಲ್ಲೇ 10,000 ಕೋಟಿ ರು ಸಾಲ ಎತ್ತಲಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕರ್ನಾಟಕ ಸರ್ಕಾರ ಸೇರಿದಂತೆ ಇತರೆ ರಾಜ್ಯಗಳು ಸಹ ಇದೇ ತ್ರೈಮಾಸಿಕದಲ್ಲಿ ಒಟ್ಟಾರೆ 2,54,040 ಕೋಟಿ ರು. ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಆರ್‍‌ಬಿಐಗೆ ತಿಳಿಸಿದೆ.

 

2024ರ ಮೇ 7ರಂದು ದೇಶದ ಒಟ್ಟು ರಾಜ್ಯಗಳು 23,400 ಕೋಟಿ ರು ಸಾಲ ಎತ್ತಲಿವೆ. ಈ ಪೈಕಿ ಕರ್ನಾಟಕ ಸರ್ಕಾರವು 2,000 ಕೋಟಿ ರು.  ಎತ್ತುವಳಿ ಮಾಡಲಿದೆ.

 

ಮೇ 28ರಂದು ದೇಶದ ರಾಜ್ಯಗಳು 33,100 ಕೋಟಿ ರು ಎತ್ತಲಿರುವ ಸಾಲದ ಪೈಕಿ ಕರ್ನಾಟಕವು 3,000 ಕೋಟಿ ರು. ಪಡೆಯಲಿದೆ. ಜೂನ್‌ 4ರಂದು 18,600 ಕೋಟಿ ರು. ಸಾಲ ಎತ್ತಲಿರುವ ರಾಜ್ಯಗಳ ಪೈಕಿ ಕರ್ನಾಟಕವು 2,000 ಕೋಟಿ ರು., ಜೂನ್‌ 18ರಂದು 16,150 ಕೋಟಿ ರು ಸಾಲ ಎತ್ತಲಿರುವ ರಾಜ್ಯಗಳ ಪೈಕಿ ಕರ್ನಾಟಕವು   3,000 ಕೋಟಿ ರು. ಸಾಲ ಎತ್ತುವಳಿ ಮಾಡಲಿರುವುದು ಆರ್‍‌ಬಿಐನ ಹೇಳಿಕೆಯಿಂದ ತಿಳಿದು ಬಂದಿದೆ.

 

 

ಇದೇ ತ್ರೈಮಾಸಿಕದಲ್ಲಿ ಆಂಧ್ರ ಪ್ರದೇಶವು 20,000 ಕೋಟಿ ರು., ತಮಿಳುನಾಡು 25,000 ಕೋಟಿ , ತೆಲಂಗಾಣವು 16,000 ಕೋಟಿ, ಮಹಾರಾಷ್ಟ್ರ 60,000 ಕೋಟಿ, ಉತ್ತರ ಪ್ರದೇಶವು 19,000 ಕೋಟಿ, ಗುಜರಾತ್‌ 11,500 ಕೋಟಿ, ಕೇರಳ ಸರ್ಕಾರವು 9,000 ಕೋಟಿ ರು. ಸಾಲ ಎತ್ತಲಿದೆ ಎಂದು ಆರ್‍‌ಬಿಐ ತನ್ನ ಹೇಳಿಕೆಯಲ್ಲಿ ಮಾಹಿತಿ ಒದಗಿಸಿದೆ.

 

2024 ಜನವರಿ ಮತ್ತು ಮಾರ್ಚ್‌ ಅಂತ್ಯಕ್ಕೆ ಒಟ್ಟಾರೆ 4,13,452 ಕೋಟಿ ರು.ಗಳ ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಆರ್‍‌ಬಿಐಗೆ ತಿಳಿಸಿತ್ತು. ಈ ಪೈಕಿ ಕರ್ನಾಟಕ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗಾಗಿ ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು ಸಾಲ ಪಡೆಯುವುದಾಗಿ  ಆರ್‍‌ಬಿಐಗೆ ತಿಳಿಸಿತ್ತು. ದಕ್ಷಿಣದ ನೆರೆಯ ರಾಜ್ಯಗಳಿಗಿಂತಲೂ ಕರ್ನಾಟಕವು ಅತೀ ಹೆಚ್ಚಿನ ಮೊತ್ತದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆದಿತ್ತು.

 

2023-24 ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ 78,363 ಕೋಟಿ ರು., ಸಾಲ ಎತ್ತುವಳಿ ಮಾಡಲು ಅಂದಾಜಿಸಿದೆ. ಉಳಿದಂತೆ ಎಲ್ಐಸಿ, ಎನ್ ಎಸ್ಎಸ್ಎಫ್, ಎನ್ ಸಿಡಿಸಿಯಿಂದ 1,201 ಕೋಟಿ ರೂ. ಸಾಲವಾಗಿ ಒಟ್ಟು ಅಂದಾಜು 85,818 ಕೋಟಿ ರೂ. ಸಾಲ ಮಾಡಲು ಅಂದಾಜಿಸಿದೆ. ಈ ಪೈಕಿ 2024ರ ಫೆಬ್ರುವರಿ ಅಂತ್ಯಕ್ಕೆ 67,367 ಕೋಟಿ ರು ಸಾಲ ಎತ್ತಿರುವುದು ಗೊತ್ತಾಗಿದೆ.

ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು. ಸಾಲ ಎತ್ತುವಳಿ; ಆರ್‍‌ಬಿಐ ಕದ ತಟ್ಟಿದ ಸರ್ಕಾರ

2024ರ ಜನವರಿ 2ರಿಂದ ಜನವರಿ 30ರ ಅಂತ್ಯಕ್ಕೆ ಒಟ್ಟಾರೆ ಅಂತ್ಯಕ್ಕೆ 26,000 ಕೋಟಿ ರು. ಸಾಲ ಎತ್ತಲು ಆರ್‍‌ಬಿಐನ ಕದ ತಟ್ಟಿತ್ತು. ಜನವರಿ 2ರಂದು 6,000 ಕೋಟಿ ರು., ಜನವರಿ 9ರಂದು 7,000 ಕೋಟಿ ರು., ಜನವರಿ 16ರಂದು 5,000 ಕೋಟಿ ರು., ಜನವರಿ 23ರಂದು 5,000 ಕೋಟಿ ರು, ಜನವರಿ 30ರಂದು 3,000 ಕೋಟಿ ರು. ಸಾಲದ ಮೊತ್ತವನ್ನು ನಮೂದಿಸಿತ್ತು.

 

 

ಫೆಬ್ರುವರಿ 6ರಂದು 5,000 ಕೋಟಿ ರು., ಫೆ.13ರಂದು 5,000 ಕೋಟಿ ರು., ಫೆ.20ರಂದು 5,000 ಕೋಟಿ ರು., ಫೆ.27ರಂದು 5,000 ಕೋಟಿ ರು., ಮಾರ್ಚ್‌ 5ರಂದು 5,000 ಕೋಟಿ ರು., ಮಾರ್ಚ್‌ 12 ರಂದು 4,000 ಕೋಟಿ ರು., ಮಾರ್ಚ್‌ 19ರಂದು 3,000 ಕೋಟಿ ರು., ಸಾಲ ಎತ್ತಲು ತಿಳಿಸಿತ್ತು.  ವಿಶೇಷವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಕ್ಟೋಬರ್ 17ರಿಂದಲೇ ಆರ್‍‌ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲದ ಎತ್ತುವಳಿ ಆರಂಭಿಸಿತ್ತು.

 

 

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ರಾಜ್ಯ ಸರ್ಕಾರವು ಅಕ್ಟೋಬರ್‌ 17ರಿಂದಲೇ  ಆರ್‍‌ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಲ್ಲಿ  1,000 ಕೋಟಿ ರೂ. ಸಾಲ ಎತ್ತುವಳಿ  ಮಾಡಿದೆ. ಅ.23ರಂದು 2,000 ಕೋಟಿ ರೂ., ಅ.31ರಂದು 2,000 ಕೋಟಿ ರೂ., ನ.1ರಂದು 3,000 ಕೋಟಿ ರೂ., ನ.21ರಂದು 1,000 ಕೋಟಿ ರೂ., ಡಿ.5ರಂದು 4,000 ಕೋಟಿ ರೂ., ಡಿ.12ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಡಿ.19ರಂದು 4,000 ಕೋಟಿ ರೂ. ಡಿ.26ರ‌ಂದು 3,000 ಕೋಟಿ ರೂ. ಸೇರಿದಂತೆ 23,000 ಕೋಟಿ ರು. ಸಾಲ ಮಾಡಿತ್ತು.

ನಿರಂತರ ಏರಿಕೆ; ಎಂಟೇ ತಿಂಗಳಲ್ಲಿ 32,289.99 ಕೋಟಿ ರು. ಸಾರ್ವಜನಿಕ ಸಾಲ

ಇದೇ ತ್ರೈಮಾಸಿಕದಲ್ಲಿ ಆಂಧ್ರಪ್ರದೇಶ 16,000 ಕೋಟಿ ರು. ಸಾಲ ಎತ್ತುವಳಿ ಮಾಡಿತ್ತು. .ಕೇರಳ ಸರ್ಕಾರವು 7,600 ಕೋಟಿ ರು., ತೆಲಂಗಾಣವು 13,000 ಕೋಟಿ ರು., ತಮಿಳುನಾಡು 37,000 ಕೋಟಿ ರು., ಸಾಲ ಎತ್ತಿರುವುದನ್ನು ಸ್ಮರಿಸಬಹುದು.

Hot this week

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...
Please Scan to make Your Contribution

Topics

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗ ವಿರೋಧ; ಪದ್ದತಿ ಸಂಪೂರ್ಣವಾಗಿ ತೆಗೆದು ಹಾಕದೇ ವರದಿಯನ್ನೇ ಮೂಲೆಗುಂಪು ಮಾಡಿತೇ ಸರ್ಕಾರ?

ಬೆಂಗಳೂರು; 'ರಾಜ್ಯದಲ್ಲಿ   ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿಯಿಂದಾಗಿ  ವೃತ್ತಿಪರತೆಯ ಕೊರತೆ...

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

Related Articles

Popular Categories

error: Content is protected !!