Thursday | August 20, 2026 |

ಶಾಸಕರಿಗೆ ‘ನಿದ್ರಾ’ ಮಾದರಿ ಹಾಸಿಗೆ, ದಿಂಬು ಖರೀದಿ; ಕಾಯರ್ ಬೋರ್ಡ್‌ ಬದಿಗಿರಿಸಿದ ಸರ್ಕಾರ

ಬೆಂಗಳೂರು; ಶಾಸಕರಿಗೆ  ‘ನಿದ್ರಾ’ ಮಾದರಿಯ ಹಾಸಿಗೆ, ದಿಂಬು, ತಲೆದಿಂಬು, ಸೋಫಾ, ಡೋರ್‍‌ ಫುಟ್‌ ಮ್ಯಾಟ್‌, ಟರ್ಕಿ ಟವಲ್‌, ಉಲ್ಲನ್‌ ಬೆಡ್‌ ಶೀಟ್‌ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು 1.60 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಸರ್ಕಾರವು ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದೆ.

 

ಶಾಸಕರ ಭವನಕ್ಕೆ 2012ರಿಂದ 2023ರವರೆಗೂ  ಸಿಂಗಲ್‌ ಬೆಡ್‌, ಡಬಲ್‌ ಬೆಡ್‌ , ಸೋಫಾ ಲೂಸ್‌ ಕುಷನ್‌, ತಲೆದಿಂಬು, ಡೋರ್‍‌ ಫುಟ್‌ ಮ್ಯಾಟ್‌ಗಳನ್ನು ಸಾರ್ವಜನಿಕ ಉದ್ದಿಮೆಯಾದ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದಲೇ ಹಾಸಿಗೆಗಳನ್ನು ಖರೀದಿಸಲಾಗುತ್ತಿತ್ತು.

 

ಆದರೆ ಇವುಗಳು ಸರಿ ಇಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚರೋಪತಿ ಕ್ಷೇಮ ವನದಲ್ಲಿ ಬಳಸಿದ್ದ ನಿದ್ರಾ ಮಾದರಿಯ ಹಾಸಿಗೆಗಳನ್ನೇ ಕೊಯಮತ್ತೂರಿನ ಖಾಸಗಿ ಕಂಪನಿಯಿಂದ ಖರೀದಿಸಲು ಮುಂದಾಗಿದೆ.

 

ಶಾಸಕರ ಕೊಠಡಿಗಳಿಗೆ ಅಗತ್ಯವಿರುವ ಸಿಂಗಲ್‌, ಡಬಲ್‌ ಹಾಸಿಗೆ, ದಿಂಬು ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಖರೀದಿಸಲು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿದೆ. ಈ ಸಂಬಂಧ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ದಾಖಲೆಗಳನ್ನು ಪಡೆದಿದೆ.

 

ಹಾಸಿಗೆ ಹಾಗೂ ಇನ್ನಿತರೆ ವಸ್ತುಗಳನ್ನು ಕೂಡಲೇ ಬದಲಾಯಿಸಿ ಹೊಸದಾದ ಹಾಸಿಗಗಳನ್ನು ನೀಡಬೇಕು ಎಂದು ಶಾಸಕರ ಒತ್ತಡ ಹೇರಿದ್ದರು.  ಇದಕ್ಕೆ  ಮಣಿದಿರುವ ವಿಧಾನಸಭೆ ಸಚಿವಾಲಯವು, ಆರ್ಥಿಕ ಇಲಾಖೆಗೆ 4(ಜಿ) ವಿನಾಯಿತಿಗಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ತಿಳಿದು ಬಂದಿದೆ.

 

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದನೆ ನೀಡಿದ್ದಾರೆ.

 

ಮೊದಲ ಬಾರಿಗೆ ಆಯ್ಕೆಯಾದ ಶಾಸಕರುಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚರೋಪತಿ ಆಯುರ್ವೇದಿಕ್‌ ಕ್ಷೇಮ ವನದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ನೀಡಿದ್ದ ನಿದ್ರಾ ಮಾದರಿ ಹಾಸಿಗೆಗಳನ್ನೇ ಒದಗಿಸಬೇಕು ಎಂದು ಶಾಸಕರು ಬೇಡಿಕೆ ಇರಿಸಿದ್ದರು. ಹೀಗಾಗಿ ನಿದ್ರಾ ಮಾದರಿಯ ಹಾಸಿಗೆಗಳನ್ನೇ ಖರೀದಿಸಲು ವಿಧಾನಸಭೆ ಸಚಿವಾಲಯವು ದರ ಪಟ್ಟಿ ಪಡೆದಿತ್ತು.

 

‘ಮೊದಲ ಬಾರಿಗೆ ಆಯ್ಕೆಯಾದ ಸದಸ್ಯರುಗಳಿಗೆ ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚೋರಪತಿ ಆಯುರ್ವೇದಿಕ್‌ ಸೆಂಟರ್‍‌ನ ಕ್ಷೇಮ ವನದಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಸಭಾಧ್ಯಕ್ಷ ಯು ಟಿ ಖಾದರ್‌ ಸೇರಿದಂತೆ ಶಾಸಕರು   ಹಾಗೂ ಸಚಿವಾಲಯದ ಅಧಿಕಾರಿಗಳು ಅಲ್ಲಿ ಬಳಕೆ ಮಾಡುತ್ತಿರುವ ಹಾಸಿಗೆಗಳನ್ನು ಪರಿಶೀಲಿಸಿದ್ದರು.

 

ಈ ಹಾಸಿಗೆಗಳು ದೇಹಾರೋಗ್ಯಕ್ಕೆ ಸೂಕ್ತವಾದಂತಹ ಮತ್ತು ಆರಾಮದಾಯಕವಾಗಿರುವಂತಹ ನಿದ್ರಾ ಮಾದರಿಯ ಹಾಸಿಗೆಗಳೆಂದು ತಿಳಿದು ಬಂದಿರುತ್ತದೆ,’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರಿಗೆ ಪ್ರಸ್ತಾವನೆಯಲ್ಲಿ ವಿವರಿಸಿದ್ದರು.

 

300 ಸಂಖ್ಯೆಯ ಸಿಂಗಲ್‌ ಹಾಶಿಗೆ, 150 ಸಂಖ್ಯೆಯ ಡಬಲ್‌ ಹಾಸಿಗೆ ಹಾಗೂ 1,250 ಸಂಖ್ಯೆಯ ದಿಂಬು, 50 ಸೆಟ್‌ ಸೋಫಾ ಲೂಸ್‌ ಕುಷನ್‌, 200 ಸಂಖ್ಯೆಯ ಡೋರ್‍‌ ಫುಟ್‌ ಮ್ಯಾಟ್‌, 1,000 ಸಂಖ್ಯೆಯ ರಬ್ಬರ್‍‌ ಫುಟ್‌ ಮ್ಯಾಟ್‌, 1,250 ಸಂಖ್ಯೆಯ ಸಿಂಗಲ್‌ ಬೆಡ್‌ಶೀಟ್‌, 600 ಸಂಖ್ಯೆಯ ಡಬಲ್‌ ಬೆಡ್‌ಶೀಟ್‌, 250 ಸಂಖ್ಯೆ ಟರ್ಕಿ ಟವಲ್‌, 600 ಸಂಖ್ಯೆಯ ಉಲ್ಲನ್‌ ಬೆಡ್‌ ಶೀಟ್‌, ಬ್ಲಾಂಕೇಟ್‌ಗಳನ್ನು ಕೊಯಮತ್ತೂರಿನ ರಿಪೋಸ್‌ ಮ್ಯಾಟ್ರಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ನೇರವಾಗಿ ಖರೀದಿಸಲು ಪ್ರಸ್ತಾವನೆಯಲ್ಲಿ ಕೋರಿದ್ದರು ಎಂಬುದು ತಿಳಿದು ಬಂದಿದೆ.

 

ರೆಸ್ಟೋಲೆಕ್ಸ್‌, ಬೆಂಗಳೂರಿನ ಸದಾಶಿವನಗರದಲ್ಲಿರುವ ಜತ್ತಿ ಟ್ರಾಕ್ಸ್‌ ಎಲ್ಎಲ್‌ಪಿ ನಿಂದ ದರ ಪಟ್ಟಿ ಪಡೆದಿತ್ತು. ಈ ಪೈಕಿ ರಿಪೋಸ್‌ ಮ್ಯಾಟ್ರಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಿದೆ ಎಂಬುದು ಗೊತ್ತಾಗಿದೆ.

Hot this week

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...
Please Scan to make Your Contribution

Topics

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

Related Articles

Popular Categories

error: Content is protected !!