Saturday | September 19, 2026 |

ಎಸ್‌ ಎಸ್‌ ಮಾಲ್‌ ; ಭಾರೀ ವಿದ್ಯುತ್‌ ವಾಹಕಗಳಿದ್ದರೂ ವಿನ್ಯಾಸದ ಅನುಮೋದನೆಗೆ ಪತ್ರ

ಬೆಂಗಳೂರು; ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ ಎಸ್‌ ಗಣೇಶ್‌ ಮಾಲೀಕತ್ವದ ಎಸ್‌ ಎಸ್‌ ಮಾಲ್‌ಗಾಗಿ ಏಕ ನಿವೇಶನ ವಿನ್ಯಾಸ ಮಂಜೂರಾತಿ ವೇಳೆಯಲ್ಲಿ ಬೆಸ್ಕಾಂ ಅಧಿಕಾರಿಗಳು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೊಂದಿಗೆ ಶಾಮೀಲಾಗಿದ್ದರು!

ಶಾಬನೂರು ಗ್ರಾಮದ ಸರ್ವೆ ನಂಬರ್‌ 73/1, 74/1, 76/1,2ರ ಪ್ರದೇಶಕ್ಕೆ ಅಂತಿಮ ಕೈಗಾರಿಕೆ ಏಕ ನಿವೇಶನದಲ್ಲಿ ಭಾರೀ ವಿದ್ಯುತ್‌ ವಾಹಕಗಳಿದ್ದರೂ ಅನುಮೋದನೆ ನೀಡಲಾಗಿತ್ತು. ಅಲ್ಲದೆ ಈ ಪ್ರದೇಶಕ್ಕೆ ಏಕ ನಿವೇಶನ ವಿನ್ಯಾಸ ನೀಡುವಾಗ ವಿನ್ಯಾಸದಲ್ಲಿ ವಿನ್ಯಾಸದಲ್ಲಿ ಭಾರೀ ವಿದ್ಯುತ್‌ ವಾಹಕವನ್ನು ಸೂಚಿಸದೇ ವಿನ್ಯಾಸವನ್ನು ಮಂಜೂರು ಮಾಡಬೇಕು ಎಂದು ಖುದ್ದು ಎಸ್‌ ಎಸ್‌ ಗಣೇಶ್‌ ಅವರು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಯುಕ್ತರ ಮೇಲೆ ಪತ್ರ ಮುಖೇನ ಒತ್ತಡ ಹೇರಿದ್ದರು!

ಗಣೇಶ್‌ ಬರೆದಿದ್ದ ಪತ್ರದಲ್ಲೇನಿತ್ತು?

ಸದರಿ ಜಮೀನಿನಲ್ಲಿ ಉತ್ತರ ಭಾಗದಲ್ಲಿರುವ ಭಾರೀ ವಿದ್ಯುತ್‌ ವಾಹಕವನ್ನು ಸ್ಥಳಾಂತರಿಸುವ ಸಂಬಂಧ ಹರಿಹರ ತಾಲೂಕು ಗುತ್ತೂರ್‌ನಲ್ಲಿರುವ ಬೆಸ್ಕಾಂ ಸಬ್‌ ಸ್ಟೇಷನ್‌ ಅಧಿಕಾರಿಗಳು ಈಗಾಗಲೇ ಸ್ಥಳ ತನಿಖೆ ಮಾಡಿ ಅಳತೆ ಕ್ರಮ ವಹಿಸುತ್ತಿದ್ದಾರೆ. ಆದ್ದರಿಂದ ಸದರಿ ಜಮೀನಿಗೆ ಅಂತಿಮ ಕೈಗಾರಿಕಾ ಏಕ ನಿವೇಶನ ವಿನ್ಯಾಸ ನೀಡುವಾಗ ವಿನ್ಯಾಸದಲ್ಲಿ ಭಾರೀ ವಿದ್ಯುತ್‌ ವಾಹಕವನ್ನು ಸೂಚಿಸದೇ ವಿನ್ಯಾಸವನ್ನು ಮಂಜೂರಾತಿ ನೀಡಬೇಕು,’ ಎಂದು ಎಸ್‌ ಎಸ್‌ ಗಣೇಶ್‌ ಅವರು 2014ರ ಆಗಸ್ಟ್‌ 20ರಂದು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಲ್ಲದೆ ಇದೇ ಜಾಗದಲ್ಲಿದ್ದ ಭಾರೀ ವಿದ್ಯುತ್‌ ವಾಹಕಗಳ ಕಂಬಗಳನ್ನು ಹೊಂದಿದ್ದ ರಸ್ತೆ ಕಬಳಿಸಲು ನೆರವಾದ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆಯಾಗಿದ್ದರೂ ಆಗಿನ ಜಿಲ್ಲಾಧಿಕಾರಿ ಎಸ್‌ ಟಿ ಅಂಜನ್‌ಕುಮಾರ್‌ ಮತ್ತು ಪಾಲಿಕೆ ಆಯುಕ್ತರು ಒಂದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಎಸ್‌ ಎಸ್‌ ಗಣೇಶ್ ಅವರು 9 ನಿವೇಶನಗಳನ್ನು ಖರೀದಿಸಿ ಅವುಗಳನ್ನು ಕಾನೂನು ಪ್ರಕಾರ ಏಕ ನಿವೇಶನ ಮಾಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರಾದರೂ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಈ ಸಂಬಂಧ ಎಸ್‌ ಎಸ್‌ ಗಣೇಶ್‌ ಅವರೇ ಕಾಲಾವಕಾಶ ಕೇಳಿದ್ದರು. ಒತ್ತುವರಿ ಆಗಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಕಾಲಾವಕಾಶ ಪೂರ್ಣಗೊಂಡ ನಂತರ ಈವರೆವಿಗೂ ಒತ್ತುವರಿಯನ್ನು ತೆರವುಗೊಂಡಿಲ್ಲ.

ರಸ್ತೆಗಳು ಅನುಪಯುಕ್ತವಾಗಿವೆ ಮತ್ತು ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ ಎಸ್‌ ಗಣೇಶ್‌ ಮಾಲೀಕತ್ವದ ಎಸ್‌ ಎಸ್‌ ಮಾಲ್‌ಗಾಗಿ ವಸತಿ ವಿನ್ಯಾಸದಲ್ಲಿನ ನಿವೇಶನಗಳನ್ನು ಒಂದುಗೂಡಿಸಲು ದಾವಣಗೆರೆ ಮಹಾನಗರಪಾಲಿಕೆಯ ಹಿಂದಿನ ಆಯಕ್ತರು ಕೈಗಾರಿಕೆ ಉಪಯೋಗಕ್ಕೆ ಪರಿವರ್ತಿಸಲು ಅನುಮತಿ ನೀಡಿದ್ದನ್ನು ಸ್ಮರಿಸಬಹುದು.

Hot this week

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...
Please Scan to make Your Contribution

Topics

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

Related Articles

Popular Categories

error: Content is protected !!