Thursday | September 17, 2026 |

ಮೂರನೇ ಅಲೆ ಆತಂಕ; ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆ!

ಬೆಂಗಳೂರು; ಕೋವಿಡ್‌ 2ನೇ ಅಲೆ ದೇಶದಾದ್ಯಂತ ಕೋಲಾಹಲ ಎಬ್ಬಿಸಿದ್ದರೂ ಆರೋಗ್ಯ ಮೂಲ ಸೌಕರ್ಯಯಗಳು, ಆರೋಗ್ಯ ಕೇಂದ್ರ ಮತ್ತು ಕೋವಿಡ್‌ ಆಸ್ಪತ್ರೆಗಳ ಸ್ಥಾಪನೆ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿಲ್ಲ. 2020ರ ಡಿಸೆಂಬರ್ ಮತ್ತು ಏಪ್ರಿಲ್‌ 2021ರ ಮಧ್ಯೆ ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. 2020 ಮತ್ತು 2021ರ ಮಧ್ಯೆ ಸಾಕಷ್ಟು ಕಾಲಾವಕಾಶಗಳಿದ್ದರೂ ಕೋವಿಡ್‌ 2ನೇ ಅಲೆಯನ್ನು ಎದುರಿಸಲು ಸಜ್ಜುಗೊಳ್ಳುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

2020ರ ಮಾರ್ಚ್‌ನಲ್ಲಿ ಆರಂಭವಾಗಿದ್ದ ಕೋವಿಡ್‌ ನ ಮೊದಲ ಅಲೆಯು ಸೆಪ್ಟಂಬರ್‌ನಲ್ಲಿ ಉತ್ತುಂಗಕ್ಕೇರಿತ್ತು. ಈ ಅವಧಿಯಲ್ಲಿಯೂ ಕೋವಿಡ್‌ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ವಿಸ್ತರಣೆ ವೇಗವು ಕಡಿಮೆಯಾಗಿತ್ತು. ವಿಶೇಷವಾಗಿ ಕೋವಿಡ್‌ಗೆಂದೇ ಮೀಸಲಾದ ಆಸ್ಪತ್ರೆಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿತ್ತು.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 2020ರ ಡಿಸೆಂಬರ್‌ನಲ್ಲಿದ್ದ 4,300 ಕೋವಿಡ್‌ ಆಸ್ಪತ್ರೆಗಳಿದ್ದವು. 2021ರ ಏಪ್ರಿಲ್‌ ಹೊತ್ತಿಗೆ ಇದರ ಸಂಖ್ಯೆ 4,043ಕ್ಕೆ ಇಳಿದಿದೆ. ಅದೇ ರೀತಿ ಕೋವಿಡ್‌ಗೆಂದೇ ಮೀಸಲಾದ ಆರೈಕೆ ಕೇಂದ್ರಗಳ ಸಂಖ್ಯೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ 2020ರಲ್ಲಿ 8,857 ಕೇಂದ್ರಗಳಿದ್ದರೆ 2021ರ ಏಪ್ರಿಲ್‌ನಲ್ಲಿ 9,313ಕ್ಕೆ ಏರಿವೆ. ಆದರೆ ಕೋವಿಡ್‌ ಆರೈಕೆ ಕೇಂದ್ರಗಳು ತೀವ್ರತರವಾದ ಪ್ರಕರಣಗಳನ್ನು ಎದುರಿಸುವಷ್ಟು ಸಜ್ಜುಗೊಂಡಿಲ್ಲ ಎಂದು ಆರೋಗ್ಯ ಮೂಲಗಳು ತಿಳಿಸಿವೆ.

ಇನ್ನು, 2020ರ ಮೇ ತಿಂಗಳಲ್ಲಿ 115,134 ಮಿಲಿಯನ್ ಆಮ್ಲಜನಕ ಸೌಲಭ್ಯ ಹಾಸಿಗೆಗಳಿದ್ದವು. 2021ರ ಏಪ್ರಿಲ್‌ 9ರ ಅಂತ್ಯಕ್ಕೆ ದೇಶದಲ್ಲಿ ಈ ಸಂಖ್ಯೆ 255,168 ಕ್ಕೇರಿವೆ. ಆದರೂ 2020ರ ಡಿಸೆಂಬರ್‌ರಿಂದ ಏಪ್ರಿಲ್ 2021ರ ಅಂತ್ಯಕ್ಕೆ ಹೋಲಿಸಿದರೆ ಶೇ.6ರಷ್ಟು ಕಡಿಮೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳೇ ತೋರಿಸುತ್ತಿವೆ.

ಹಾಗೆಯೇ ಕೇಂದ್ರ ಸರ್ಕಾರವು 102,400 ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸುಮಾರು 39,000 ವೆಂಟಿಲೇಟರ್‌ಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಿತ್ತು. ಜನವರಿ 24 ರೊಳಗೆ ರಾಜ್ಯಗಳಿಗೆ ವಿತರಿಸಿತ್ತು. ಆದರೂ ಆರೋಗ್ಯ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸುವ ಜವಾಬ್ದಾರಿ ಇರುವುದು ರಾಜ್ಯ ಸರ್ಕಾರಗಳ ಮೇಲೆಯೇ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೋವಿಡ್‌ 2ನೇ ಅಲೆ ಅಪ್ಪಳಿಸುವ ಹೊತ್ತಿಗೆ ರಾಜ್ಯ ಸರ್ಕಾರಗಳು 35,269 ವೆಂಟಿಲೇಟರ್‌ಗಳನ್ನು ಅಳವಡಿಸಿದ್ದವು.

ಕೇಂದ್ರ ಸರ್ಕಾರವು ಮಾರ್ಚ್ 24, 2020 ಮತ್ತು ಮಾರ್ಚ್ 3, 2021 ರ ನಡುವೆ 38,867 ಹಂಚಿಕೆ ಮಾಡಿತ್ತು. ಇದು ಒಟ್ಟಾರೆ ಶೇ. 91ರಷ್ಟು ಎಂಬುದನ್ನು ಅಂಕಿ ಅಂಶಗಳು ತೋರಿಸುತ್ತವೆ. ಹಂಚಿಕೆಯಾಗಿದ್ದ ವೆಂಟಿಲೇಟರ್‌ಗಳ ಪೈಕಿ ಕರ್ನಾಟಕದಲ್ಲಿ ಶೇ 61ರಷ್ಟಿವೆ. ಇನ್ನುಳಿದಂತೆ ಅಸ್ಸಾಂನಲ್ಲಿ ಶೇ 100, ಗೋವಾದಲ್ಲಿ ಶೇ.80, ಒಡಿಶಾದಲ್ಲಿ ಶೇ.75, ಪಂಜಾಬ್‌ನಲ್ಲಿ ಶೇ.62, ಮಧ್ಯಪ್ರದೇಶದಲ್ಲಿ ಶೇ.57, ಅರುಣಾಚಲ ಪ್ರದೇಶದಲ್ಲಿ ಶೇ.56ರಷ್ಟು ವೆಂಟಿಲೇಟರ್‌ಗಳನ್ನು ಅಳವಡಿಸಿವೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳಿಂದ ತಿಳಿದು ಬಂದಿದೆ.

Hot this week

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...
Please Scan to make Your Contribution

Topics

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...

Related Articles

Popular Categories

error: Content is protected !!