Wednesday | May 6, 2026 |

ಖಾತೆಗಳಲ್ಲಿ 19.42 ಕೋಟಿ ವ್ಯತ್ಯಾಸ, 19.06 ಕೋಟಿ ಮೌಲ್ಯದ ದಾಸ್ತಾನು ಕೊರತೆ; ಲೆಕ್ಕಪರಿಶೋಧನೆ

ಬೆಂಗಳೂರು; ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮುಖ್ಯ ಕಚೇರಿಯ ಖಾತೆ ಮತ್ತು ಶಾಖೆಗಳ ಖಾತೆಗಳ ನಡುವೆ 19.42 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ. ಅದೇ ರೀತಿ ಮಂಡಳವು ಹೊಂದಿರುವ ಗೋದಾಮು ಮತ್ತು ಶಾಖೆಗಳಲ್ಲಿ 19.06 ಕೋಟಿಯಷ್ಟು ಮೌಲ್ಯದ 9,469 ಮೆಟ್ರಿಕ್‌ ಟನ್‌ನಷ್ಟು ದಾಸ್ತಾನಿನಲ್ಲಿ ಕೊರತೆ ಇರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

 

ಕರ್ನಾಟಕ ರಾಜ್ಯ ಕೋ-ಆಪರೇಟೀವ್‌ ಸೊಸೈಟಿ ಮಹಾಮಂಡಲದಲ್ಲಿ 2023ರ ಅಕ್ಟೋಬರ್‍‌ವರೆಗೆ ನಡೆದಿದೆ ಎನ್ನಲಾಗಿರುವ ಒಟ್ಟಾರೆ 19.34 ಕೋಟಿ ರು. ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‍‌ ದಾಖಲಾಗಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ 2022-23ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯೂ ಮುನ್ನೆಲೆಗೆ ಬಂದಿದೆ.

 

ಲೆಕ್ಕ ಪರಿಶೋಧನಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ವ್ಯಾಪಾರ ಸಂದಾಯಗಳು (ಸಂಡ್ರಿ ಕ್ರೆಡಿಟಾರ್ಸ್‌)ನಲ್ಲಿ ಮಹಾ ಮಂಡಳವು ನಡೆಸುವ ವಿವಿಧ ರೀತಿಯ ವ್ಯಾಪಾರ ವ್ಯವಹಾರಗಳ ಸಲುವಾಗಿ 140.00 ಕೋಟಿಯಷ್ಟು ಮೊತ್ತಕ್ಕೆ ಖಾತೆಗಳಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಾಚಾರವೇ ಆಗಿಲ್ಲವೆಂಬುದು ಲೆಕ್ಕ ಪರಿಶೋಧನಾ ವರದಿಯಿಂದ ಗೊತ್ತಾಗಿದೆ.

 

 

ಅದೇ ರೀತಿ ಮಹಾಮಂಡಳದ ಹಣಕಾಸು ಲೆಕ್ಕಗಳಿಗೂ ಅಪೆಕ್ಸ್‌ ಬ್ಯಾಂಕ್‌ನಲ್ಲಿನ ಬಾಕಿ ಮೊತ್ತದ ದೃಢೀಕರಣಕ್ಕೆ ತಾಳೆ ಆಗುತ್ತಿಲ್ಲ. ಮಹಾಮಂಡಳವು ಹೊರಗಿನಿಂದ ಸಾಲ ಪಡೆಯಲು ಪ್ರತ್ಯೇಕವಾದ ಉಪ ನಿಯಮಗಳನ್ನು ರಚಿಸಿಕೊಂಡಿಲ್ಲ. 2023ರ ಮಾರ್ಚ್‌ 31ರ ಅಂತ್ಯಕ್ಕೆ ಎನ್‌ಸಿಡಿಸಿ ಸಂಸ್ಥೆಗೆ 47,42,087 ರು.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿದೆ. ಅಲ್ಲದೇ ಎನ್‌ಸಿಸಿಡಿಸಿಯಿಂದ ಪಡೆದಿರುವ ಸಾಲಕ್ಕೆ ದೃಢೀಕರಣ ಲಭ್ಯವಿಲ್ಲ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ.

 

ಮಹಾಮಂಡಳವು ಠೇವಣಿ ಸಂಗ್ರಹಿಸಲು ಪ್ರತ್ಯೇಕವಾ ಉಪ ನಿಯಮಗಳನ್ನು ರಚಿಸಿಕೊಂಡಿಲ್ಲ. ಕೆಲವು ಠೇವಣಿಗಳಲ್ಲಿನ ಬಾಕಿ ಮೊತ್ತಗಳು ಋಣಾತ್ಮಕವಾಗಿವೆ. ಕೃಷಿ ಮಾರಾಟ ಇಲಾಖೆಗೆ 5,13,04,15,779 ರು. ಪಾವತಿಸಲು ಬಾಕಿ ಇರುವುದು ವರದಿಯಿಂದ ಗೊತ್ತಾಗಿದೆ.

 

ವ್ಯಾಪಾರ ಸಂದಾಯಗಳು (ಸಂಡ್ರಿ ಕ್ರೆಡಿಟಾರ್ಸ್‌)ನಲ್ಲಿ ಮಹಾ ಮಂಡಳವು ನಡೆಸುವ ವಿವಿಧ ರೀತಿಯ ವ್ಯಾಪಾರ ವ್ಯವಹಾರಗಳ ಸಲುವಾಗಿ 140.00 ಕೋಟಿಯಷ್ಟು ಮೊತ್ತಕ್ಕೆ ಖಾತೆಗಳಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಾಚಾರ ಆಗಿಲ್ಲ.

 

ಇದಕ್ಕೆ ಸಂಬಂಧಪಟ್ಟ ದೃಢೀಕರಣ ಪಡೆದು ತಾಳೆ ಮಾಡಬೇಕು. ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದೆ. ಮಹಾಮಂಡಳದ ಹಣಕಾಸು ತಃಖ್ತೆಗಳಲ್ಲಿ ಅಪೆಕ್ಸ್‌ ಬ್ಯಾಂಕ್‌ಗಳ ಬಾಕಿ ಮೊತ್ತವು ದೃಢೀಕರಣಕ್ಕೆ ತಾಳೆ ಇರುವುದಿಲ್ಲ. ಸಮನ್ವಯ ಪಟ್ಟಿ ತಯಾರಿಸಿದ ನಂತರ ಸಹ ಅಪೆಕ್ಸ್‌ ಬ್ಯಾಂಕ್‌ಗಳ ತಾಳೆ ಆಗದೇ ಇರುವುದನ್ನು ಲೆಕ್ಕ ಪರಿಶೋಧನಾ ವೇಳೆಯಲ್ಲಿ ಗಮನಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಗಳು ಜವಾಬ್ದಾರರರು ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ.

 

ಮಹಾಮಂಡಳದಲ್ಲಿ ಕೆಲವು ನಿಷ್ಕ್ರೀಯ ಬ್ಯಾಂಕ್‌ ಖಾತೆಗಳು (ಸ್ಥಗಿತವಾದ ಬ್ಯಾಂಕ್‌ ಖಾತೆಗ) 2023ರ ಮಾರ್ಚ್‌ 31ರ ಅಂತ್ಯಕ್ಕೆ 14,51,120 ರು. ಇದೆ. ಕೆಲವು ವರ್ಷಗಳಿಂದ ಯಾವುದೇ ವ್ಯವಹಾರಗಳು ಈ ಖಾತೆಗಳಲ್ಲಿ ಕಂಡುಬಂದಿರುವುದಿಲ್ಲ. ಹಾಗೂ ಇದಕ್ಕೆ ಸಂಬಂಧಪಟ್ಟ ಯಾವುದೆ ದೃಢೀಕರಣವನ್ನೂ ಮಹಾಮಂಡಳವು ಪಡೆದಿಲ್ಲ.

 

ಸ್ಥಿರಾಸ್ತಿ ಚರಾಸ್ತಿ ರಿಜಿಸ್ಟ್ರೇಷನ್‌ ನಿರ್ವಹಣೆ ಮಾಡಿಲ್ಲ. ಮಂಡಳದ ಕೆಲವು ಶಾಖಾ ವ್ಯವಸ್ಥಾಪಕರು ದಾಸ್ತಾನು ಪರಿಶೀಲನೆಯನ್ನು ನಿಗದಿತ ಸಮಯದಲ್ಲಿ ಮಾಡಿಲ್ಲ. ವರದಿಯನ್ನೂ ಸಹ ನಿಗದಿತ ಸಮಯಕ್ಕೆ ನೀಡಿಲ್ಲ. ಖರೀದಿ ಬೆಲೆಯನ್ನು ಆಧರಿಸಿ ದಾಸ್ತಾನು ಮೌಲ್ಯವನ್ನು ನಿರ್ಧರಿಸಿದ್ದಾರೆ.

 

ಆಂತರಿಕ ಲೆಕ್ಕ ಪರಿಶೋಧನಾ ಸಿಬ್ಬಂದಿಗಳು ದಾಸ್ತಾನು ಪರಿಶೀಲನೆಯನ್ನು ನಡೆಸಿ ನೀಡಿರುವ ವರದಿಗಳಲ್ಲಿ ದಾಸ್ತಾನು ಕೊರತೆ ಕಂಡು ಬಂದಿದೆ. ಲೆಕ್ಕ ಪರಿಶೋಧನೆಗೆ ಒದಗಿಸಿರುವ ಮಾಹಿತಿ ಹಾಗೂ ದಾಖಲೆಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಹಲವು ವರ್ಷಗಳಿಂದಲೂ ಮಂಡಳದಲ್ಲಿ ಹಣ ದುರುಪಯೋಗ ನಡೆಯುತ್ತಿದೆ. ಮಾರಾಟ ಕೇಂದ್ರಗಳಲ್ಲಿ ಕೇಂದ್ರ ಕಚೇರಿಯು ಅನುಮೋದಿಸಿದ ಮೊತ್ತಗಳಿಗಿಂತ ಕೆಲವು ವೆಚ್ಚಗಳನ್ನು ಅಧಿಕವಾಗಿ ಮಾಡಿದೆ. ಅಧಿಕ ಮೊತ್ತಗಳಿಗೆ ಕೇಂದ್ರ ಕಚೇರಿಯಿಂದ ಅನುಮೋದನೆ ಪಡೆದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

 

ಮುಖ್ಯ ಕಚೇರಿಯ ಖಾತೆ ಮತ್ತು ಶಾಖೆಗಳ ಖಾತೆಗಳ ನಡುವೆ 19.42 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ. ಶಾಖೆಗಳು ಮತ್ತು ಪ್ರಧಾನ ಕಚೇರಿಯ ಏಕೀಕೃತ ಹಣಕಾಸು ಪಟ್ಟಿಯನ್ನು ತಯಾರಿಸುವಾಗ ಶಾಖೆಯ ಖಾತೆಗಳಲ್ಲಿ ಮುಖ್ಯ ಕಚೇರಿಯ ಮೊತ್ತ, ಮುಖ್ಯ ಕಚೇರಿಯ ಖಾತೆಗಳಲ್ಲಿನ ಶಾಖೆಗಳ ಮೊತ್ತವು ಶೂನ್ಯವಾಗಿರಬೇಕು.

 

ಆದರೆ ಮುಖ್ಯ ಕಚೇರಿ ಮತ್ತು ಶಾಖೆಗಳ ಖಾತೆಗಳ ನಡುವೆ 19,42,66,374 ರ.ಗಳನ್ನು ಬ್ಯಾಲೆನ್ಸ್‌ ಶೀಟ್‌ನಲ್ಲಿ ಸ್ವತ್ತು ಎಂದು ವರ್ಗೀಕರಿಸಲಾಗಿದೆ. ಈ ಖಾತೆಗಳಲ್ಲಿನ ವ್ಯತ್ಯಾಗಳು ಹಲವು ವರ್ಷಗಳಿಂದಳು ಮುಂದುವರೆದಿವೆ. ಮಹಾಮಂಡಳದ ಸದಸ್ಯರು ಸರಿಯಾಗಿ ಸಾಲ ಮತ್ತು ಮುಂಗಡವನ್ನು ಮರು ಪಾವತಿಸುತ್ತಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ಬೆಳಗಾವಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿನ ಗೋದಾಮುಗಳಲ್ಲಿ ದಾಸ್ತಾನಿನಲ್ಲಿ ಕೊರತೆ ಕಂಡು ಬಂದಿದೆ. ಬೆಳಗಾವಿ ವಿಭಾಗದ ವಿಜಯಪುರದಲ್ಲಿ 40 ಮೆಟ್ರಿಕ್‌ ಟನ್‌, ಮುಧೋಳದಲ್ಲಿ 86.645 ಮೆಟ್ರಿಕ್‌ ಟನ್‌, ನರಗುಂದದಲ್ಲಿ 502 ಮೆಟ್ರಿಕ್‌ ಟನ್‌, ಬಾಗಲಕೋಟೆಯಲ್ಲಿ 534.395 ಮೆಟ್ರಿಕ್‌ ಟನ್‌, ಹಾವೇರಿಯಲ್ಲಿ 568 ಮೆಟ್ರಿಕ್‌ ಟನ್‌, ಗದಗ್‌ನಲ್ಲಿ 238.75ಮೆಟ್ರಿಕ್‌ ಟನ್‌, ಶಿರಸಿಯಲ್ಲಿ 64.95ಮೆಟ್ರಿಕ್‌ ಟನ್‌, ಅಥಣಿಯಲ್ಲಿ 27.45 ಮೆಟ್ರಿಕ್‌ ಟನ್ನಷ್ಟು ದಾಸ್ತಾನಿನಲ್ಲಿ ವ್ಯತ್ಯಾಸವಿದೆ.

 

ಮೈಸೂರು ವಿಭಾಗದ ಚಿಕ್ಕಮಗಳೂರು, ಕಡೂರಿನಲ್ಲಿ 421.5 ಮೆಟ್ರಿಕ್‌ ಟನ್‌, ಕುಶಾಲನಗರದಲ್ಲಿ 76 ಮೆಟ್ರಿಕ್‌ ಟನ್‌, ಮದ್ದೂರಿನಲ್ಲಿ 45,646, ಮಂಡ್ಯದಲ್ಲಿ 337.935 ಮೆಟ್ರಿಕ್‌ ಟನ್‌, ವ್ಯತ್ಯಾಸವಿದೆ.

 

 

 

ಕಲ್ಬುರ್ಗಿ ವಿಭಾಗದ ಸಿಂಧನೂರಿನಲ್ಲಿ 3,938.15 ಮೆಟ್ರಿಕ್‌ ಟನ್‌, ಕೊಪ್ಪಳದಲ್ಲಿ 6.65 ಮೆಟ್ರಿಕ್‌ ಟನ್‌, ಬೀದರ್‍‌ನಲ್ಲಿ 293.08 ಮೆಟ್ರಿಕ್ ಟನ್‌, ಕಲ್ಬುರ್ಗಿಯಲ್ಲಿ 100.38 ಮೆಟ್ರಿಕ್‌ ಟನ್‌, ಶಹಾಪುರದಲ್ಲಿ 664.17 ಮೆಟ್ರಿಕ್‌ ಟನ್‌, ಗಂಗಾವತಿಯಲ್ಲಿ 37.85 ಮೆಟ್ರಿಕ್‌ ಟನ್‌, ಹೊಸಪೇಟೆಯಲ್ಲಿ 476.445 ಮೆಟ್ರಿಕ್‌ ಟನ್‌, ರಾಯಚೂರಿನಲ್ಲಿ 736.35 ಮೆಟ್ರಿಕ್‌ ಟನ್‌ ಕೊರತೆ ಕಂಡು ಬಂದಿದೆ.

 

ಬೆಂಗಳೂರು ವಿಭಾಗದ ಚಿಕ್ಕಬಳ್ಳಾಪುರದಲ್ಲಿ 129.475 ಮೆಟ್ರಿಕ್‌ ಟನ್‌, ದಾವಣಗೆರೆಯಲ್ಲಿ 167.600ಮೆಟ್ರಿಕ್‌ ಟನ್‌ ಸೇರಿ ಒಟ್ಟಾರೆ 359.475 ಮೆಟ್ರಿಕ್‌ ಟನ್‌ ಕೊರತೆ ಕಂಡು ಬಂದಿದೆ. ಇದೆಲ್ಲದರ ಒಟ್ಟಾರೆ ಮೊತ್ತ 19.06ಕೋಟಿಯಷ್ಟು ಎಂದು ತಿಳಿದು ಬಂದಿದೆ.

 

ಮಹಾಮಂಡಳವು ರಸಗೊಬ್ಬರ, ಕ್ರಿಮಿನಾಶಕಗಳು ಸ್ವಂತ ಹಾಗೂ ಕಾಪು ದಾಸ್ತಾನು ಯೋಜನೆಯಡಿಯಲ್ಲಿ ಸಂಗ್ರಹಿಸಿ ವಿತರಿಸುತ್ತಿದೆ. ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ರಾಗಿ, ಭತ್ತ, ಬಿಳಿ ಜೋಳ ರೈತರಿಂದ ಖರೀದಿಸಲಿದೆ. ಕೇಂದ್ರ ಸರ್ಕಾರದ ಪರವಾಗಿ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ಮತ್ತು ಬೆಲೆ ಸ್ಥಿರೀಕರಣ ಯೋಜನೆಯಡಿಯಲ್ಲಿ ತೊಗರಿ, ಕಡಲೆ, ಉದ್ದು, ಹೆಸರುಕಾಳು, ಸೋಯಾ ಮತ್ತು ಒಣ ಕೊಬ್ಬರಿ ಖರೀದಿಸುವ ನೋಡಲ್‌ ಏಜೆನ್ಸಿಯಾಗಿದೆ.

 

2022ರಿಂದ ಇದುವರೆಗೂ ಎಂ ಎನ್‌ ರಾಜೇಂದ್ರಕುಮಾರ್‌ ಅವರು ಮಹಾಮಂಡಳದ ಅಧ್ಯಕ್ಷರಾಗಿರುವುದನ್ನು ಸ್ಮರಿಸಬಹುದು.

Hot this week

ಒಂದೇ ಜಾಗದಲ್ಲಿ ಎರಡು ಫ್ಲೈ ಓವರ್, ಶೇ.50ರಷ್ಟು ಕಾಮಗಾರಿಯಾಗಿದ್ದರೂ ಪೂರ್ಣ ಪಾವತಿ; ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲಿಲ್ಲ, ಗುತ್ತಿಗೆದಾರರಿಗೆ ಲಾಭ, ಬಿಬಿಎಂಪಿ ನಿಧಿಗೆ ನಷ್ಟ

ಬೆಂಗಳೂರು;  ಈಜಿಪುರ ಮೇಲ್ಸೇತುವೆ ಎಲಿವೇಟೆಡ್‌ ಕಾರಿಡಾರ್  ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ  ಪೂರ್ಣಗೊಳಿಸದ...

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ,...

ವೈಟ್‌ ಟ್ಯಾಪಿಂಗ್‌ ಗೋಲ್ಮಾಲ್‌; ಅಗತ್ಯವಿರದಿದ್ದರೂ ಕಾಮಗಾರಿ, ತಾಂತ್ರಿಕ ಪರಿಶೀಲನೆಯಿಲ್ಲದಿದ್ದರೂ ಹೆಚ್ಚುವರಿ ವೆಚ್ಚ, ಗುತ್ತಿಗೆದಾರರಿಗೆ ಲಾಭ

ಬೆಂಗಳೂರು;  ವೈಟ್‌ ಟ್ಯಾಪಿಂಗ್ ಅಗತ್ಯವಿಲ್ಲದಿದ್ದರೂ  ಕಾಮಗಾರಿ ಆರಂಭಿಸಿದ ನಂತರ ತಾಂತ್ರಿಕ ಮಂಜೂರಾತಿ...
Please Scan to make Your Contribution

Topics

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ,...

ವೈಟ್‌ ಟ್ಯಾಪಿಂಗ್‌ ಗೋಲ್ಮಾಲ್‌; ಅಗತ್ಯವಿರದಿದ್ದರೂ ಕಾಮಗಾರಿ, ತಾಂತ್ರಿಕ ಪರಿಶೀಲನೆಯಿಲ್ಲದಿದ್ದರೂ ಹೆಚ್ಚುವರಿ ವೆಚ್ಚ, ಗುತ್ತಿಗೆದಾರರಿಗೆ ಲಾಭ

ಬೆಂಗಳೂರು;  ವೈಟ್‌ ಟ್ಯಾಪಿಂಗ್ ಅಗತ್ಯವಿಲ್ಲದಿದ್ದರೂ  ಕಾಮಗಾರಿ ಆರಂಭಿಸಿದ ನಂತರ ತಾಂತ್ರಿಕ ಮಂಜೂರಾತಿ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕದಲ್ಲಿ ಡಿಸಿಎಂ ಮೇಲುಗೈ, ಜಾರಕಿಹೊಳಿ ಮೌನ; ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ ಸಿಎಂ

ಬೆಂಗಳೂರು;  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ...

Related Articles

Popular Categories

error: Content is protected !!