Sunday | July 5, 2026 |

ವಿದ್ಯುತ್‌ ಖರೀದಿಯ 16,323 ಕೋಟಿ ಬಾಕಿ, 14,413 ಕೋಟಿ ಸಂಚಿತ ನಷ್ಟ; ಎಸ್ಕಾಂಗಳಿಂದ ರಾಜ್ಯ ಹಣಕಾಸಿಗೆ ಅಪಾಯ

ಬೆಂಗಳೂರು; ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದಿರುವುದು ಮತ್ತು ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ವಿಫಲವಾಗಿರುವುದು ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ದುರ್ಬಲ ಹಣಕಾಸಿ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ ವಿದ್ಯುತ್‌ ಕಂಪನಿಗಳು (ಎಸ್ಕಾಂಗಳು) ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಮುನ್ಸೂಚನೆ ನೀಡಿದೆ.

 

ಆಯವ್ಯಯದ ಜತೆಯಲ್ಲಿ ಮಂಡನೆಯಾಗಿರುವ 2023-27ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಎಸ್ಕಾಂಗಳ ಹಣಕಾಸಿನ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಲಾಗಿದೆ. ಎಸ್ಕಾಂಗಳ ಸುಧಾರಣೆ ಕುರಿತು ಇಂಧನ ಸಚಿವ ವಿ ಸುನಿಲ್‌ಕುಮಾರ್‌ ಅವರು ಇತ್ತೀಚೆಗಷ್ಟೇ  ಹೇಳಿಕೆ ನೀಡಿದ್ದರ ಬೆನ್ನಲ್ಲೇ  ಮಧ್ಯಮಾವಧಿ ವಿತ್ತೀಯ ಯೋಜನೆಯು ನೀಡಿರುವ ವರದಿಯಲ್ಲಿ  ಎಸ್ಕಾಂಗಳ ಕಾರ್ಯನಿರ್ವಹಣೆ ಕುರಿತು ಬೆಳಕು ಚೆಲ್ಲಿರುವುದು ಮುನ್ನೆಲೆಗೆ ಬಂದಿದೆ.

 

‘ರಾಜ್ಯ ವಿದ್ಯುತ್‌ ಕಂಪನಿಗಳ ದುರ್ಬಲ ಹಣಕಾಸು ಪರಿಸ್ಥಿತಿಯು ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇರುತ್ತದೆ. ರಾಜ್ಯ ಸರ್ಕಾರವು ವಿದ್ಯುತ್‌ ಕಂಪನಿಗಳ ಮತ್ತು ಕೆಪಿಸಿಎಲ್‌ನ ಸಾಲಗಳಿಗೆ 30,895 ಕೋಟಿ ರು.ಗಳ ಖಾತರಿ ನಿಡಿದೆ. ಈ ಕಂಪನಿಗಳು ಸಾಲವನ್ನು ಮರು ಪಾವತಿಸಲು ವಿಫಲವಾದರೆ ಇಂತಹ ಖಾತರಿಗಳ ಕಾರಣದಿಂದ ಒಟ್ಟು ಸಾಲದ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ,’ ಎಂದು ವಿವರಿಸಿದೆ.

 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್‌ 2022ರವರೆಗೆ ವಿದ್ಯುತ್‌ ಸರಬರಾಜು ಕಂಪನಿಗಳ ಎಲ್‌ಪಿಎಸ್‌ ಬಾಕಿಗಳಿಗಾಗಿ 13,709 ಕೋಟಿ ರುಗಳೂ ಸೇರಿದಂತೆ 17,465 ಕೋಟಿ ರು.ಗಳ ಖಾತರಿ ನೀಡಿದೆ. ಈ ಖಾತರಿಗಳು ಸಾದಿಲ್ವಾರು ಹೊಣೆಗಾರಿಕೆಗಳಾಗಿದ್ದು ಖಾತರಿ ಪಡೆದ ವಿದ್ಯುತ್‌ ಕಂಪನಿಗಳು ಮರುಪಾವತಿ ಮಾಡದಿದ್ದಲ್ಲಿ ಸಂಪೂರ್ಣ ಸಾಲ ಮರುಪಾವತಿ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಎಚ್ಚರಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

‘ರಾಜ್ಯವು ರಾಜ್ಯ ಉದ್ದಿಮೆಗಳಿಗೆ ವಿತರಿಸಿದ ಖಾತರಿಗಳಿಂದ ಉದ್ಭವಿಸುವ ಹೊಣೆಗಾರಿಕೆಗಳನ್ನು ಪೂರೈಸುವುದಕ್ಕಾಗಿ ಖಾತರಿ ನಿಧಿಯನ್ನು ರೂಪಿಸಿದೆ. ರಾಜ್ಯ ಸರ್ಕಾರವು ಡಿಸೆಂಬರ್‌ 2022ರವರೆಗೆ ವಿತರಿಸಿದ ಖಾತರಿಗಳ ಬಾಕಿ ಮೊತ್ತವು (ಬಡ್ಡಿ ಸೇರಿದಂತೆ) 36,657 ಕೋಟಿ ರು>ಗಾಇದೆ. ಇದು ಹಿಂದಿನ ಎರಡನೇ ವರ್ಷದ ರಾಜಸ್ವ ಸ್ವೀಕೃತಿಗಳ ಶೇ.21.7ರಷ್ಟಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ವಿದ್ಯುತ್‌ ಉತ್ಪಾದಕ, ಪ್ರಸರಣ ಕಂಪನಿಗಳಿಗೆ ಎಸ್ಕಾಂಗಳು ವಿದ್ಯುತ್‌ ಖರೀದಿ ಬಾಕಿ ರೂಪದಲ್ಲಿ 16,323 ಕೋಟಿ ರು.ಗಳಷ್ಟಿದೆ.  2022ರ ಡಿಸೆಂಬರ್‌ ಅಂತ್ಯಕ್ಕೆ 30,554 ಕೋಟಿ ರು. ಎಸ್ಕಾಂಗಳ ಬಾಕಿ ಸಾಲ ಇದೆ. ಅಲ್ಲದೇ ಎಸ್ಕಾಂಗಳ ಸಂಚಿತ ನಷ್ಟವು 2022ರ ಮಾರ್ಚ್‌ ಅಂತ್ಯಕ್ಕೆ 14,413 ಕೋಟಿ ರು.ಗಳಷ್ಟಿದೆ.

 

‘ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ಎಸ್ಕಾಂಗಳ ವೈಫಲ್ಯದಿಂದಾಗಿ ಕೆಪಿಸಿಎಲ್‌ನ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ. ಮತ್ತು ಕೆಪಿಸಿಎಲ್‌ನ ಬಾಕಿ ಸಾಲಗಳು 31,258 ಕೋಟಿ ರುಗಳಿಗೆ ಏರಲು ಕಾರಣವಾಗಿದೆ,’ ಎಂದು ಸಮಿತಿಯು ವರದಿಯಲ್ಲಿ ವಿಶ್ಲೇಷಿಸಿದೆ.

 

ಮಧ್ಯಮಾವಧಿ ವಿತ್ತೀಯ ಯೋಜನೆ ವರದಿ ಪ್ರಕಾರ ಎಸ್ಕಾಂಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದೇ ಇರುವುದು, ಕ್ರಾಸ್‌ ಸಬ್ಸಿಡೈಸೇಷನ್‌ ಮಟ್ಟ ಹೆಚ್ಚಿರುವುದು, ಹೆಚ್ಚಿನ ವಿದ್ಯುತ್‌ ದರದ ವಿದ್ಯುತ್‌ ಖರೀದಿಗೆ ಮತ್ತು ಹೆಚ್ಚು ಪಾವತಿಸುವಂತಹ ಗ್ರಾಹಕರು ಮುಕ್ತ ಬಳಕೆ/ಬಂಧಿತ ಉತ್ಪಾದನೆಯ ಕಡೆ ಹೊರಳುತ್ತಿರುವುದು ಎಸ್ಕಾಂಗಳನ್ನು ನಷ್ಟ ಮತ್ತು ಸಮಸ್ಯೆಗಳಿಗೆ ದೂಡಿವೆ.

Hot this week

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...
Please Scan to make Your Contribution

Topics

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...

Related Articles

Popular Categories

error: Content is protected !!