Thursday | April 16, 2026 |

ವಿದ್ಯುತ್‌ ಖರೀದಿಯ 16,323 ಕೋಟಿ ಬಾಕಿ, 14,413 ಕೋಟಿ ಸಂಚಿತ ನಷ್ಟ; ಎಸ್ಕಾಂಗಳಿಂದ ರಾಜ್ಯ ಹಣಕಾಸಿಗೆ ಅಪಾಯ

ಬೆಂಗಳೂರು; ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದಿರುವುದು ಮತ್ತು ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ವಿಫಲವಾಗಿರುವುದು ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ದುರ್ಬಲ ಹಣಕಾಸಿ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ ವಿದ್ಯುತ್‌ ಕಂಪನಿಗಳು (ಎಸ್ಕಾಂಗಳು) ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಮುನ್ಸೂಚನೆ ನೀಡಿದೆ.

 

ಆಯವ್ಯಯದ ಜತೆಯಲ್ಲಿ ಮಂಡನೆಯಾಗಿರುವ 2023-27ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಎಸ್ಕಾಂಗಳ ಹಣಕಾಸಿನ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಲಾಗಿದೆ. ಎಸ್ಕಾಂಗಳ ಸುಧಾರಣೆ ಕುರಿತು ಇಂಧನ ಸಚಿವ ವಿ ಸುನಿಲ್‌ಕುಮಾರ್‌ ಅವರು ಇತ್ತೀಚೆಗಷ್ಟೇ  ಹೇಳಿಕೆ ನೀಡಿದ್ದರ ಬೆನ್ನಲ್ಲೇ  ಮಧ್ಯಮಾವಧಿ ವಿತ್ತೀಯ ಯೋಜನೆಯು ನೀಡಿರುವ ವರದಿಯಲ್ಲಿ  ಎಸ್ಕಾಂಗಳ ಕಾರ್ಯನಿರ್ವಹಣೆ ಕುರಿತು ಬೆಳಕು ಚೆಲ್ಲಿರುವುದು ಮುನ್ನೆಲೆಗೆ ಬಂದಿದೆ.

 

‘ರಾಜ್ಯ ವಿದ್ಯುತ್‌ ಕಂಪನಿಗಳ ದುರ್ಬಲ ಹಣಕಾಸು ಪರಿಸ್ಥಿತಿಯು ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇರುತ್ತದೆ. ರಾಜ್ಯ ಸರ್ಕಾರವು ವಿದ್ಯುತ್‌ ಕಂಪನಿಗಳ ಮತ್ತು ಕೆಪಿಸಿಎಲ್‌ನ ಸಾಲಗಳಿಗೆ 30,895 ಕೋಟಿ ರು.ಗಳ ಖಾತರಿ ನಿಡಿದೆ. ಈ ಕಂಪನಿಗಳು ಸಾಲವನ್ನು ಮರು ಪಾವತಿಸಲು ವಿಫಲವಾದರೆ ಇಂತಹ ಖಾತರಿಗಳ ಕಾರಣದಿಂದ ಒಟ್ಟು ಸಾಲದ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ,’ ಎಂದು ವಿವರಿಸಿದೆ.

 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್‌ 2022ರವರೆಗೆ ವಿದ್ಯುತ್‌ ಸರಬರಾಜು ಕಂಪನಿಗಳ ಎಲ್‌ಪಿಎಸ್‌ ಬಾಕಿಗಳಿಗಾಗಿ 13,709 ಕೋಟಿ ರುಗಳೂ ಸೇರಿದಂತೆ 17,465 ಕೋಟಿ ರು.ಗಳ ಖಾತರಿ ನೀಡಿದೆ. ಈ ಖಾತರಿಗಳು ಸಾದಿಲ್ವಾರು ಹೊಣೆಗಾರಿಕೆಗಳಾಗಿದ್ದು ಖಾತರಿ ಪಡೆದ ವಿದ್ಯುತ್‌ ಕಂಪನಿಗಳು ಮರುಪಾವತಿ ಮಾಡದಿದ್ದಲ್ಲಿ ಸಂಪೂರ್ಣ ಸಾಲ ಮರುಪಾವತಿ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಎಚ್ಚರಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

‘ರಾಜ್ಯವು ರಾಜ್ಯ ಉದ್ದಿಮೆಗಳಿಗೆ ವಿತರಿಸಿದ ಖಾತರಿಗಳಿಂದ ಉದ್ಭವಿಸುವ ಹೊಣೆಗಾರಿಕೆಗಳನ್ನು ಪೂರೈಸುವುದಕ್ಕಾಗಿ ಖಾತರಿ ನಿಧಿಯನ್ನು ರೂಪಿಸಿದೆ. ರಾಜ್ಯ ಸರ್ಕಾರವು ಡಿಸೆಂಬರ್‌ 2022ರವರೆಗೆ ವಿತರಿಸಿದ ಖಾತರಿಗಳ ಬಾಕಿ ಮೊತ್ತವು (ಬಡ್ಡಿ ಸೇರಿದಂತೆ) 36,657 ಕೋಟಿ ರು>ಗಾಇದೆ. ಇದು ಹಿಂದಿನ ಎರಡನೇ ವರ್ಷದ ರಾಜಸ್ವ ಸ್ವೀಕೃತಿಗಳ ಶೇ.21.7ರಷ್ಟಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ವಿದ್ಯುತ್‌ ಉತ್ಪಾದಕ, ಪ್ರಸರಣ ಕಂಪನಿಗಳಿಗೆ ಎಸ್ಕಾಂಗಳು ವಿದ್ಯುತ್‌ ಖರೀದಿ ಬಾಕಿ ರೂಪದಲ್ಲಿ 16,323 ಕೋಟಿ ರು.ಗಳಷ್ಟಿದೆ.  2022ರ ಡಿಸೆಂಬರ್‌ ಅಂತ್ಯಕ್ಕೆ 30,554 ಕೋಟಿ ರು. ಎಸ್ಕಾಂಗಳ ಬಾಕಿ ಸಾಲ ಇದೆ. ಅಲ್ಲದೇ ಎಸ್ಕಾಂಗಳ ಸಂಚಿತ ನಷ್ಟವು 2022ರ ಮಾರ್ಚ್‌ ಅಂತ್ಯಕ್ಕೆ 14,413 ಕೋಟಿ ರು.ಗಳಷ್ಟಿದೆ.

 

‘ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ಎಸ್ಕಾಂಗಳ ವೈಫಲ್ಯದಿಂದಾಗಿ ಕೆಪಿಸಿಎಲ್‌ನ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ. ಮತ್ತು ಕೆಪಿಸಿಎಲ್‌ನ ಬಾಕಿ ಸಾಲಗಳು 31,258 ಕೋಟಿ ರುಗಳಿಗೆ ಏರಲು ಕಾರಣವಾಗಿದೆ,’ ಎಂದು ಸಮಿತಿಯು ವರದಿಯಲ್ಲಿ ವಿಶ್ಲೇಷಿಸಿದೆ.

 

ಮಧ್ಯಮಾವಧಿ ವಿತ್ತೀಯ ಯೋಜನೆ ವರದಿ ಪ್ರಕಾರ ಎಸ್ಕಾಂಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದೇ ಇರುವುದು, ಕ್ರಾಸ್‌ ಸಬ್ಸಿಡೈಸೇಷನ್‌ ಮಟ್ಟ ಹೆಚ್ಚಿರುವುದು, ಹೆಚ್ಚಿನ ವಿದ್ಯುತ್‌ ದರದ ವಿದ್ಯುತ್‌ ಖರೀದಿಗೆ ಮತ್ತು ಹೆಚ್ಚು ಪಾವತಿಸುವಂತಹ ಗ್ರಾಹಕರು ಮುಕ್ತ ಬಳಕೆ/ಬಂಧಿತ ಉತ್ಪಾದನೆಯ ಕಡೆ ಹೊರಳುತ್ತಿರುವುದು ಎಸ್ಕಾಂಗಳನ್ನು ನಷ್ಟ ಮತ್ತು ಸಮಸ್ಯೆಗಳಿಗೆ ದೂಡಿವೆ.

Hot this week

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ,...

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

Topics

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ,...

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು...

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

Related Articles

Popular Categories

error: Content is protected !!