Wednesday | August 19, 2026 |

ದುಪ್ಪಟ್ಟು ದರದಲ್ಲಿ ಪಿಪಿಇ ಕಿಟ್‌ ಖರೀದಿ; ಬೊಕ್ಕಸಕ್ಕೆ 4 ಕೋಟಿ ನಷ್ಟ

ಬೆಂಗಳೂರು; ಕೋವಿಡ್‌ ಮೊದಲ ಅಲೆಯಲ್ಲಿ ಪಿಪಿಇ ಕಿಟ್‌ ಖರೀದಿ ಸಂಬಂಧ ನಡೆದಿದ್ದ ಅಕ್ರಮ ಪ್ರಕರಣಗಳ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಕೋವಿಡ್‌ 2ನೇ ಅಲೆಯಲ್ಲಿಯೂ ಪಿಪಿಇ ಕಿಟ್‌ ಖರೀದಿಯಲ್ಲಿ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ.

ಆರಂಭದಲ್ಲಿ ನೆಪ ಮಾತ್ರಕ್ಕೆ ದರ ಸಂಧಾನ ಸಭೆ ನಡೆಸಿರುವ ಅಧಿಕಾರಿಗಳು ಕಡಿಮೆ ದರ ನಮೂದಿಸಿದ್ದ ಉತ್ಪಾದಕ ಕಂಪನಿಗಳನ್ನು ಖರೀದಿ ಪ್ರಕ್ರಿಯೆಯಿಂದಲೇ ಹೊರಗಿಟ್ಟು ದುಬಾರಿ ದರ ನಮೂದಿಸಿರುವ ಕಂಪನಿಯಿಂದಲೇ ಕಿಟ್‌ಗಳನ್ನು ಖರೀದಿಸಿರುವುದು ಬಹಿರಂಗವಾಗಿದೆ. ನಿಗಮದ ಅಧಿಕಾರಿಗಳ ಈ ನಡೆಯಿಂದ ಬೊಕ್ಕಸಕ್ಕೆ ಅಂದಾಜು 4.00 ಕೋಟಿ ರು. ನಷ್ಟವಾಗಿದೆ. ಈ ನಷ್ಟಕ್ಕೆ ನಿಗಮದ ನಿರ್ದೇಶಕರಾದ ಓಂ ಪ್ರಕಾಶ್‌ ಪಾಟೀಲ್, ನರಹಟ್ಟಿ ಮತ್ತು ಪಿಪಿಇ ಕಿಟ್‌ ಖರೀದಿ ಸಮಿತಿ ಸದಸ್ಯ ಪ್ರವೀಣ್‌ ಕಾರಣರು ಎಂದು ತಿಳಿದು ಬಂದಿದೆ.

ಆದರೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಲತಾಕುಮಾರಿ ಮತ್ತು ಮತ್ತು ಹಿಂದಿನ ಸಚಿವ ಡಾ ಕೆ ಸುಧಾಕರ್‌ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ದಾಖಲೆಗಳು ಲಭ್ಯವಾಗಿವೆ.

ಪ್ರಕರಣದ ವಿವರ

ಕೋವಿಡ್‌ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲೆಂದು 12 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲು 2021ರ ಏಪ್ರಿಲ್‌ 26ರಂದು ದರ ಪಟ್ಟಿ ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಬಿಡ್‌ದಾರರ ಪೈಕಿ ನಿಗಮವು ಒಟ್ಟು 7 ಬಿಡ್‌ದಾರರನ್ನು ಆಯ್ಕೆಪಟ್ಟಿ ತಯಾರಿಸಿತ್ತು. ಈ ಪೈಕಿ ಕಿಟ್‌ವೊಂದಕ್ಕೆ 495 ರು. ನಿಗದಿಪಡಿಸಿದ್ದ ಎಚ್‌ ಎನ್‌ ಝಡ್‌ ಅಪರೇಲ್ಸ್‌ ಕಂಪನಿ ಎಲ್‌ 1 ಸ್ಥಾನ ಪಡೆದಿತ್ತು.

ಮೊದಲ ದರ ಸಂಧಾನ ಸಭೆ ವಿಫಲ

ಈ ದರ ದುಬಾರಿ ಎಂದಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಜೂನ್ 14ರಂದು ಜೂಮ್‌ ಸಭೆ ನಡೆಸುವ ಮೂಲಕ ಮೊದಲ ದರ ಸಂಧಾನ ಪ್ರಕ್ರಿಯೆಗೆ ಬಿಡ್‌ದಾರರನ್ನು ಆಹ್ವಾನಿಸಿತ್ತು. ಇದೇ ಸಭೆಯಲ್ಲಿ ನಿಗಮವು ಕಿಟ್‌ವೊಂದಕ್ಕೆ 370 ರು. ನಂತೆ ದರವನ್ನು ಮರು ನಿಗದಿಗೊಳಿಸಿತ್ತು. ಇದೇ ದರಕ್ಕೆ ಹೊಂದಾಣಿಕೆ ಮಾಡಿದ ಕಂಪನಿಗೆ ಖರೀದಿ ಆದೇಶ ನೀಡುವುದಾಗಿ ನಿಗಮವು ಸಭೆಯಲ್ಲಿ ಹೇಳಿತ್ತು. ಆದರೆ ಯಾವ ಬಿಡ್‌ದಾರರು ಸರ್ಕಾರ ನಿಗದಿಪಡಿಸಿದ್ದ ದರವನ್ನು ಒಪ್ಪಿರಲಿಲ್ಲ.

ಮೊದಲ ದರ ಸಂಧಾನ ಸಭೆ ವಿಫಲವಾಗಿದ್ದರೂ ಮರು ನಿಗದಿಪಡಿಸಿದ್ದ ದರಕ್ಕೆ ಸರ್ಕಾರವು ಬದ್ಧವಾಗಿತ್ತು. ಆದರೆ ಬಿಡ್‌ದಾರರು ಒಪ್ಪದ ಕಾರಣ ನಿಗಮವು 2021ರ ಜೂನ್‌ 21ರಂದು 2ನೇ ಬಾರಿಗೆ ದರ ಸಂಧಾನ ಸಭೆ ನಡೆಸಿತ್ತು. 370 ರು. ದರಕ್ಕೆ ಹೊಂದಾಣಿಕೆ ಮಾಡಿ ಕಿಟ್‌ಗಳನ್ನು ಸರಬರಾಜು ಮಾಡುವ ಸಂಬಂಧ ಎಲ್ಲಾ ಬಿಡ್‌ದಾರರಿಗೂ ಈ ಮೇಲ್‌ ಮೂಲಕ ಸಂದೇಶವನ್ನೂ ರವಾನಿಸಿತ್ತು ಎಂದು ಗೊತ್ತಾಗಿದೆ.

ಮೊದಲ ದರಪಟ್ಟಿಯಲ್ಲಿ ಎಲ್‌ 1 ಆಗಿದ್ದ ಎಚ್‌ ಎನ್‌ ಝಡ್‌ ಕಂಪನಿ 470 ರು. ನಮೂದಿಸಿತ್ತು. ವಿಶೇಷ ಎಂದರೆ ಮೊದಲ ಬಿಡ್‌ನಲ್ಲಿ ಎಲ್‌ 1 ಆಗಿದ್ದ ಎಚ್‌ ಎನ್‌ ಝಡ್‌ ಕಂಪನಿಯು ಕೇವಲ 25 ರು.ಗಳನ್ನು ಕಡಿಮೆಗೊಳಿಸಿತ್ತು. ಆದರೆ ಇದೇ ದರ ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ಯುಕ್ಬಾ ಫ್ಯಾಷನ್ಸ್‌ 367 ರು.ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿತ್ತು.

ಅಂದರೆ ಸರ್ಕಾರ ಮರು ನಿಗದಿಪಡಿಸಿದ್ದ ದರಕ್ಕಿಂತಲೂ (370) 3 ರು.ಗಳನ್ನು ಕಡಿಮೆಗೊಳಿಸಿತ್ತು. ಆಂತರಿಕ ಸಂಧಾನ ಸಭೆ ಹೊತ್ತಿಗೆ ಎಚ್‌ ಎನ್‌ ಝಡ್‌ ಕಂಪನಿಯು 70 ರು. ಕಡಿಮೆಗೊಳಿಸಿ 400 ರು. ದರ ನಮೂದಿಸಿತ್ತು. ಆದರೆ ಈ ಮಾಹಿತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

ಕಡಿಮೆ ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಕಂಪನಿ ಮುಂದೆ ಬಂದಿದ್ದರೂ ಈ ಮಾಹಿತಿಯನ್ನು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿಲ್ಲ ಮಾತ್ರವಲ್ಲದೆ ಕಡತದಲ್ಲಿಯೂ ಈ ಮಾಹಿತಿಯನ್ನು ಉಲ್ಲೇಖಿಸದೆಯೇ ಭ್ರಷ್ಟ ಅಧಿಕಾರಿಗಳ ಗುಂಪು ವ್ಯವಸ್ಥಾಪಕ ನಿರ್ದೇಶಕರನ್ನು ದಿಕ್ಕು ತಪ್ಪಿಸಿ ದುಪ್ಪಟ್ಟು ದರಕ್ಕೆ ಖರೀದಿ ಆದೇಶ ನೀಡಲಾಗಿದೆ ಎಂದು ನಿಗಮದ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಹೆಚ್ಚಿನ ದರಕ್ಕೆ ಖರೀದಿ ಆದೇಶ ನೀಡಿದ್ದೇಕೆ?

ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು. ಕಡಿಮೆ ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿದ್ದ ಯುಕ್ಬಾ ಫ್ಯಾಷನ್ಸ್‌ ಕಂಪನಿಯನ್ನು ನಿಗಮದ ಅಧಿಕಾರಿಗಳು ಪರಿಗಣಿಸಲಿಲ್ಲ. ಯುಕ್ಬಾ ಫ್ಯಾಷನ್ಸ್‌ ಕಂಪನಿ ನಮೂದಿಸಿದ್ದ ದರಕ್ಕಿಂತಲೂ 33 ರು. ದರ ಹೆಚ್ಚಳ ನಮೂದಿಸಿದ್ದ ಎಚ್‌ಎನ್‌ ಝಡ್‌ ಕಂಪನಿಗೇ ಖರೀದಿ ಆದೇಶ ನೀಡಿರುವುದರ ಹಿಂದೆ ಅಧಿಕಾರಿಗಳು ಮತ್ತು ಸರಬರಾಜುದಾರರ ಮಧ್ಯೆ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಸರ್ಕಾರ ಮರುನಿಗದಿಗೊಳಿಸಿದ್ದ ದರಕ್ಕಿಂತಲೂ 3 ರು ಕಡಿಮೆ ದರದಲ್ಲಿ ಸರಬರಾಜು ಮಾಡಲು ಆದೇಶ ನೀಡಿದ್ದರೆ 12 ಲಕ್ಷ ಕಿಟ್‌ಗಳಿಗೆ 44.04 ಕೋಟಿ ರು. ಮಾತ್ರ ವೆಚ್ಚವಾಗುತ್ತಿತ್ತು. ಆದರೆ 400 ರು. ದರಕ್ಕೆ ಆದೇಶ ನೀಡಿರುವುದರಿಂದ ಅಂದಾಜು 48 ಕೋಟಿ ರು.ವೆಚ್ಚವಾದಂತಾಗಿದೆ. ಇದರ ಪ್ರಕಾರ 4 ಕೋಟಿ ರು.ಹೆಚ್ಚುವರಿಯಾಗಿ ವೆಚ್ಚ ಮಾಡಿದಂತಾಗಿದೆ.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

Related Articles

Popular Categories

error: Content is protected !!