Sunday | March 22, 2026 |

‘ದಿ ಫೈಲ್‌’ಗೆ ವರ್ಷದ ಸಂಭ್ರಮ; ನಿಜವಾಗಿಯೂ ಇದು ಸುಲಭದ ಕೆಲಸವಲ್ಲ

Support THE-FILE

spot_img

ದಿ ಫೈಲ್’ ಅಂತೊಂದು ತನಿಖಾ ವರದಿಗಳ ಅಂರ್ತಜಾಲ ಪತ್ರಿಕೆಯನ್ನವರು ಮಾಡಲು ಹೊರಟಾಗ ನನ್ನ ಪ್ರಕಾರ ಅವರ ಜೊತೆ ಇದ್ದಿದ್ದು ಅವರ ಧೈರ್ಯ ಮಾತ್ರ! ಧೈರ್ಯ, ತನಿಖೆ ಮಾಡುವ ಬಗೆಗಿನದಲ್ಲ; ಅದನ್ನವರು ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ನಿಷ್ಠೂರವಾಗಿ ದಿಟ್ಟವಾಗಿ ಪ್ರಾಮಾಣಿಕವಾಗಿ ಮಾಡುತ್ತಲೇ ಬಂದಿದ್ದಾರೆ.

ಆದರೆ ಅಷ್ಟೂ ವರ್ಷದ ಅವರ ಪ್ರಯಾಣದಲ್ಲಿ ಅವರಿಗೆ ಒಂದಲ್ಲಾ ಒಂದು ಸುದ್ದಿಸಂಸ್ಥೆಯ ಆಸರೆಯಿತ್ತು, ತಿಂಗಳು ಮುಗಿದರೆ ಸಂಬಳ ಬರುವ ನೆಚ್ಚಿಕೆಯಿತ್ತು, ಯಾರಾದರೂ ಘಾತುಕರು ಬೆನ್ನುಬಿದ್ದರೆ ಕಾಯುವುದಕ್ಕೆ ಒಂದು ವ್ಯವಸ್ಥೆಯಿತ್ತು, ಕಾನೂನು ಹೋರಾಟದ ಅಗತ್ಯಬಿದ್ದರೆ ವಕಾಲತ್ತು ಹಾಕಲು ಆಯಾ ಕಂಪನಿಯ ಲೀಗಲ್ ಟೀಮುಗಳೇ ಇದ್ದವು, ವೃತ್ತಿಪರ ಹಾಗೂ ನೈತಿಕ ಬೆಂಬಲಕ್ಕೆ ಸಂಪಾದಕರುಗಳಿದ್ದರು; ಯಾವುದೇ ಅಡೆತಡೆ ಅಡ್ಡಿ ಆತಂಕಗಳಿಲ್ಲದೆ ಅವರ ತನಿಖಾ ಸರಣಿ ನಡೆದಿತ್ತು. ಎಂತೆಂಥಾ ಘಟಾನುಗಟಿಗಳನ್ನೆಲ್ಲಾ ಅವರು ಅಲ್ಲಾಡಿಸಿಬಿಟ್ಟಿದ್ದರು ಆಗ!

ಅಂಥದ್ದೊಂದು ವಲಯದಿಂದ ಹೊರಬಿದ್ದು ಸ್ವಂತವಾಗಿ ಡಿಜಿಟಲ್ ತನಿಖಾ ಪತ್ರಿಕೆ ಶುರುಮಾಡುವುದಿದೆಯಲ್ಲಾ, ಅದು ಹುಚ್ಚುತನದ ಇನ್ನೊಂದು ಮಜಲು; ಅದೂ ಕೈಯಲ್ಲಿ ಕನಿಷ್ಠ ಒಂದು ತಿಂಗಳ ದಿನಸಿಗಾಗುವಷ್ಟೂ ದುಡ್ಡಿಲ್ಲದಾಗ! ಆದರೆ ಮಹಾಂತೇಶ್ ಅವರಿಗೆ ತಮ್ಮ ಕೆಲಸದ ಮೇಲೆ ಪ್ರಾಮಾಣಿಕತೆಯ ಮೇಲೆ ನಂಬಿಕೆಯಿತ್ತು, ತಾವು ಈ ಹತ್ತು ವರ್ಷಗಳಲ್ಲಿ ತಮ್ಮ ನೇರವಂತಿಕೆ ಹಾಗೂ ವೃತ್ತಿಪರತೆಯ ಮೂಲಕವೇ ಗಳಿಸಿಕೊಂಡಿದ್ದ ತಮ್ಮ ಹಿತೈಷಿಗಳ ಬಳಗದ ಬೆಂಬಲದ ಬಗ್ಗೆ ಧೈರ್ಯವಿತ್ತು; ಮುನ್ನುಗ್ಗಿಯೇಬಿಟ್ಟರು.

ಈಗ ನೋಡಿದರೆ ಅವರ ಸಾಹಸಕ್ಕೆ ಆಗಲೇ ಒಂದು ವರ್ಷವಾಗಿದೆ! ಈ ಒಂದು ವರ್ಷದಲ್ಲಿ ಹಲವಾರು ಭ್ರಷ್ಟ ಅಧಿಕಾರಿಗಳನ್ನವರು ವಿಚಾರಣೆಯ ಒರೆಗಲ್ಲಿನ ಮೇಲೆ ನೂಕಿದ್ದಾರೆ, ಮಂತ್ರಿಯೊಬ್ಬರ ರಾಜೀನಾಮೆಗೆ ಕಾರಣರಾಗಿದ್ದಾರೆ, ಕೋವಿಡ್ ಹೆಸರಿನಲ್ಲಿ ನಡೆದ ಹಗಲು ಲೂಟಿಯ ಬಗ್ಗೆ ಸಾಲುಸಾಲು ವರದಿಗಳನ್ನು ಮಾಡಿ ಜಡ್ಡುಗಟ್ಟಿ ಕೂತಿದ್ದ ವಿರೋಧಪಕ್ಷದವರೂ ಮೈಕೊಡವಿಕೊಂಡೆದ್ದು ಬೀದಿ ಹೋರಾಟಕ್ಕೆ ಧುಮುಕುವ ಹಾಗೆ ಮಾಡಿದ್ದಾರೆ! ಕೊನೆಗೆ, ಇತ್ತೀಚೆಗೆ, ಮಠಾಧೀಶರೊಬ್ಬರ ಸಂಬಂಧಿಯ ಬಗ್ಗೆ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿ ಮೈಮೇಲೆ ಪೊಲೀಸ್ ಕೇಸೆಳೆದುಕೊಂಡಿದ್ದಾರೆ — ಅದೂ, ಆತನ ಬಗ್ಗೆ ಮುಖ್ಯವಾಹಿನಿಯ ಪತ್ರಿಕೆಗಳು ನಾಕು ಸಾಲು ನೇರವಾದ ಸುದ್ದಿ ಹಾಕಲೂ ಹಿಂಜರಿಯುತ್ತಿರುವ ಈ ದಿನಗಳಲ್ಲಿ!

ಬಹುಶಃ ಚಿತ್ರದುರ್ಗದ ಪೊಲೀಸರು ಈ ಕೇಸು ಹಾಕಿದ ಸಂದರ್ಭದಲ್ಲೇ ಮಹಾಂತೇಶ್ ಅವರ ಸಾತ್ವಿಕ ಬಳಗದ ವಿಸ್ತಾರ ಮತ್ತು ಶಕ್ತಿ ಜಗತ್ತಿಗೆ ತಿಳಿದಿದ್ದು! ಆದರೆ ಅಂತರಂಗದಲ್ಲಿ ಅವರನ್ನು ಬಲ್ಲ ಪತ್ರಕರ್ತ ಮಿತ್ರರಿಗದು ಮುಂಚಿನಿಂದಲೇ ಗೊತ್ತಿದ್ದ ಸತ್ಯ. ಆ ಸತ್ಯ ಅವರನ್ನು ಗೆಲ್ಲಿಸಿದೆ.
ಒಂದು ವರ್ಷವೆನ್ನುವುದು, ಇಂಥದ್ದೊಂದು ವಿಶಿಷ್ಟ ಪತ್ರಿಕೋದ್ಯಮದಲ್ಲಿ ತುಂಬಾ ದೊಡ್ಡದು. ಇದು ಇನ್ನೂ ಬೆಳೆಯುವುದಕ್ಕೆ, ಜನಪರವಾದ ಒಂದು ಧ್ವನಿಯಾಗಿ ಇನ್ನಷ್ಟು ಗಟ್ಟಿಗೊಳ್ಳುವುದಕ್ಕೆ, ಖಂಡಿತವಾಗಿಯೂ ಮಹಾಂತೇಶ್ ಅವರ ಪ್ರಯತ್ನಕ್ಕೆ ಒಂದಿಷ್ಟು ನಿರಂತರ ಹರಿವಿನ ಆರ್ಥಿಕ ಬಲದ ಅಗತ್ಯವಿದೆ.

ಕೇವಲ ಇಚ್ಛಾಶಕ್ತಿಯಿಂದಲೇ ನಡೆಯುತ್ತಿರುವ ಅವರ ವಸ್ತುನಿಷ್ಠ ತನಿಖಾ ವರದಿಗಾರಿಕೆ ನಿರಂತರವಾಗಿ ನಡೆಯಬೇಕು, ಅವರಿಗೆ ಸಹೃದಯಿ ಹಾಗೂ ಸಮಾಜಮುಖಿ ಪೋಷಕರು ಜೊತೆಯಾಗಬೇಕು. ಒಳ್ಳೆಯ ಉದ್ದೇಶದ ಒಳ್ಳೆಯ ಕೆಲಸಕ್ಕೆ ಅಂಥ ಬೆಂಬಲ ಸಿಕ್ಕೇ ಸಿಗುತ್ತದೆ.

Hot this week

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!