Sunday | May 31, 2026 |

ಕೋವಿಡ್‌-19; ದುಬಾರಿ ದರ ವಸೂಲಿ ನಡುವೆಯೂ ಖಾಸಗಿ ಆಸ್ಪತ್ರೆಗಳ ಆದಾಯ ಕುಸಿತ!

ಬೆಂಗಳೂರು; ಕೋವಿಡ್‌-19 ದೃಢಪಟ್ಟ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಅಸ್ಪತ್ರೆಗಳು ದುಬಾರಿ ದರವನ್ನು ವಸೂಲಿ ಮಾಡಿವೆ ಎಂಬ ಗುರುತರವಾದ ಆರೋಪಗಳ ನಡುವೆಯೇ ಇದೇ ಅವಧಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಕೋಟ್ಯಂತರ ಮೊತ್ತದಲ್ಲಿ ನಿವ್ವಳ ನಷ್ಟ ಹೊಂದಿವೆ ಎಂಬ ಅಂಕಿ ಅಂಶಗಳು ಬಹಿರಂಗಗೊಂಡಿವೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಎಂಬ ಹೆಗ್ಗಳಿಕೆ ಹೊಂದಿರುವ ಪೋರ್ಟಿಸ್‌ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆಗಳು ನಿವ್ವಳ ನಷ್ಟ ಹೊಂದಿರುವುದು ಗೊತ್ತಾಗಿದೆ. ಫೋರ್ಟಿಸ್ ಹೆಲ್ತ್‌ಕೇರ್‌ 2019ರ ಏಪ್ರಿಲ್-ಜೂನ್‌ನಲ್ಲಿ 1,138.3 ಕೋಟಿ ರೂ. ಗಳಿಂದ 2020 ರ ಏಪ್ರಿಲ್-ಜೂನ್‌ನಲ್ಲಿ 606 ಕೋಟಿ ರೂ. ಗೆ ಕುಸಿದಿದೆ. ಒಟ್ಟು ಆದಾಯ 523.4 ಕೋಟಿ ರು ಅಥವಾ ಶೇ 46.8ರಷ್ಟು ಕುಸಿದಿದೆ. ಕೋವಿಡ್‌ ತ್ರೈಮಾಸಿಕದಲ್ಲಿ 178.9 ಕೋಟಿ ರು. ನಿವ್ವಳ ನಷ್ಟ ಹೊಂದಿದೆ ಎಂದು ಇಂಡಿಯಾ ಸ್ಪೆಂಡ್‌ ವರದಿ ಮಾಡಿದೆ.

ಅದೇ ರೀತಿ ನಾರಾಯಣ ಹೃದಯಾಲಯವು ತನ್ನ ಒಟ್ಟು ಆದಾಯದಲ್ಲಿ 383.9 ಕೋಟಿ ರು.ಗೆ ಕುಸಿದಿದೆ. (777.4 ಕೋಟಿಯಿಂದ 393.5 ಕೋಟಿ ರೂ.ಗೆ) ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 30.3ಕೋಟಿ ರು.ನಿವ್ವಳ ಲಾಭಕ್ಕೆ ಹೋಲಿಸಿದರೆ ಕೋವಿಡ್‌ ತ್ರೈಮಾಸಿಕದಲ್ಲಿ 119.7 ಕೋಟಿ ರು.ಗೆ ಕುಸಿದಿದೆ ಎಂದು ತಿಳಿದು ಬಂದಿದೆ.

ಕೋವಿಡ್‌-19 ಸಂಕೀರ್ಣ ಸಂದರ್ಭ. ನಿಯಮಿತವಾಗಿ ಪರೀಕ್ಷೆ, ತಪಾಸಣೆ, ಚಿಕಿತ್ಸೆಗೆಂದು ಹೋಗುತ್ತಿದ್ದವರು ಆಸ್ಪತ್ರೆಗಳಿಂದ ಹಲವು ತಿಂಗಳುಗಳಿಂದ ದೂರ ಉಳಿದಿದ್ದು ನಿಜ. ಹಾಗಾಗಿ ಆಸ್ಪತ್ರೆಗಳಿಗೆ ಆದಾಯ ಕುಂಠಿತವಾಗಿದ್ದರೆ ಅಚ್ಚರಿಯೇನಿಲ್ಲ. ಹಾಗೆಯೇ ಕೋವಿಡ್‌-19 ಕಾರಣವನ್ನು ಮುಂದಿಟ್ಟುಕೊಂಡು ಹಣವಂತರಿಂದ, ವಿಮೆ ಪಾಲಿಸಿದಾರರಿಂದ ಮತ್ತು ತೀವ್ರ ಜೀವ ಅಪಾಯದಲ್ಲಿರುವಂತಹ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಿರುವುದನ್ನು ತಳ್ಳಿ ಹಾಕಲಾಗದು. ಒಟ್ಟಾರೆ ಸಮಾಜ ಬಹಳ ಜವಾಬ್ದಾರಿಯಿಂದ ಕಾಳಜಿಯಿಂದ ನಡೆದುಕೊಳ್ಳಬೇಕಾದ ಸಂದರ್ಭದಲ್ಲಿ ಸಣ್ಣತನ ಮತ್ತು ದುರಾಸೆಗೆ ಒಳಗಾಗಿ ನಡೆದುಕೊಂಡಿರುವುದು ನಮ್ಮಲ್ಲಿ ಆಗಿದೆ. ಇದು ಸಮಾಜ ತಲೆತಗ್ಗಿಸುವ ಘಟನೆಗಳಿಗೆ ಕಾರಣವಾಗಿದೆ.

ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ

ಕೋವಿಡ್‌-19ರ ಹಿನ್ನೆಲೆಯಲ್ಲಿ ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಬಹುತೇಕರು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿದ್ದರು. ಡಯಾಲಿಸಿಸ್, ಕಿಮೋಥೆರಪಿ, ರಕ್ತ ವರ್ಗಾವಣೆ, ದೀರ್ಘಕಾಲದ ಕಾಯಿಲೆ ಇರುವ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಲು ಹಿಂಜರಿತ, ಅದರಲ್ಲೂ ಅಂತರರಾಷ್ಟ್ರೀಯ ವಿಮಾನಗಳ ಸ್ಥಗಿತದಿಂದಾಗಿ ವಿದೇಶಿ ರೋಗಿಗಳು ಶಸ್ತ್ರಚಿಕಿತ್ಸೆಗಳಿಗಾಗಿ ಬೆಂಗಳೂರಿಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. ಹೀಗಾಗಿ ನಿವ್ವಳ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂಬುದು ಖಾಸಗಿ ಆಸ್ಪತ್ರೆಗಳ ವಾದ.

‘ಆಸ್ಪತ್ರೆಗಳ ಆವರಣ ಸ್ವಚ್ಚಗೊಳಿಸುವ ಮತ್ತು ಆರೋಗ್ಯ ಸಿಬ್ಬಂದಿಗೆ ರಕ್ಷಣಾತ್ಮಕ ಸಾಧನಗಳ ಖರೀದಿಯೂ ಇರುವ ವೆಚ್ಚವನ್ನು ಹೆಚ್ಚಿಸಿದೆ. ಅಲ್ಲದೆ ರೋಗಿಗಳ ದಾಖಲಾತಿ ಕಡಿಮೆಯಾದ ಪರಿಣಾಮ ಇರುವ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ. ಇನ್ನು ಕೆಲವು ಅಸ್ಪತ್ರೆಗಳು ಕೋವಿಡ್‌ ಭೀತಿಯ ನಡುವೆಯೂ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಬೋನಸ್‌ಗಳನ್ನು ನೀಡಿದೆ ಎನ್ನುತ್ತಾರೆ ಖಾಸಗಿ ಅಸ್ಪತ್ರೆಯ ಹಣಕಾಸು ಅಧಿಕಾರಿಯೊಬ್ಬರು.

Hot this week

39,437 ಕೋಟಿ ರು ಸಾರ್ವಜನಿಕ ವೆಚ್ಚ; ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಯೋಜನೆಯಲ್ಲಿ ಅಕ್ರಮ ಆರೋಪ, ಸಿಬಿಐ ತನಿಖೆಗೆ ಕೇಂದ್ರ ಸಚಿವೆ ಪತ್ರ

ಬೆಂಗಳೂರು; 39,437 ಕೋಟಿ ಸಾರ್ವಜನಿಕ ವೆಚ್ಚವನ್ನು ಒಳಗೊಂಡಿರುವ ಸಮಗ್ರ ಘನ ತ್ಯಾಜ್ಯ...

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...
Please Scan to make Your Contribution

Topics

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

Related Articles

Popular Categories

error: Content is protected !!