Saturday | March 7, 2026 |

ಕೃಷಿ, ಕೈಗಾರಿಕೆ ವಲಯದ ಪಾಲು ಇಳಿಕೆ; ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ ಹಿನ್ನಡೆ

Support THE-FILE

spot_img

ಬೆಂಗಳೂರು;  ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ 2024-25ರಲ್ಲಿ ಕೃಷಿ ವಲಯದ ಪಾಲು ಶೇ.11.02ಷ್ಟಿದ್ದರೇ 2025-26ನೇ ಸಾಲಿನಲ್ಲಿ ಶೇ. 10.77ಕ್ಕೆ ಇಳಿದಿದೆ. ಅದೇ ರೀತಿ ಕೈಗಾರಿಕೆ ವಲಯದ ಪಾಲು ಸಹ 2024-25ರಲ್ಲಿ ಶೇ. 19.82ರಷ್ಟಿದ್ದರೇ 2025-26ರಲ್ಲಿ ಅದು ಶೇ. 19.36ಕ್ಕೆ ಇಳಿಕೆಯಾಗಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆ (2025-26) ವರದಿ ಮಾಡಿದೆ.

2026ರ ಮಾರ್ಚ್‌ 6ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಕುರಿತು ವಿಶ್ಲೇಷಣೆ ನಡೆಸಿದೆ.

ಜಿಲ್ಲಾ ಒಟ್ಟು ಆಂತರಿಕ ಉತ್ಪನದಲ್ಲಿಯೂ ಕೃಷಿ ವಲಯವು ಉತ್ತಮ ಸ್ಥಾನದಲ್ಲಿದೆ. ಸೇವಾ ಮತ್ತು ಕೈಗಾರಿಕೆ ವಲಯಗಳ ಪಾಲು ಕಡಿಮೆಯಿದೆ. ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ ಹಿನ್ನಡೆಯಲ್ಲಿರುವುದು ಗಮನಾರ್ಹವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ವಿಶ್ಲೇಷಿಸಿದೆ.

ಸೇವಾ ಮತ್ತು ಕೈಗಾರಿಕೆ ವಲಯಗಳಲ್ಲಿ ಉತ್ತಮ ಬೆಳವಣಿಗೆ ಹೊಂದಿರುವ ಜಿಲ್ಲೆಗಳು ಜಿಲ್ಲಾ ಒಟ್ಟು ಆಂತರಿಕ ಉತ್ಪನ್ನದಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿವೆ. ಇದಕ್ಕೆ ವಿರುದ್ಧವಾಗಿ ಜಿಲ್ಲಾ ಒಟ್ಟು ಆಂತರಿಕ ಉತ್ಪನ್ನದಲ್ಲಿ ಕಡಿಮೆ ಸ್ಥಾನದಲ್ಲಿರುವ ಕೆಲವು ಜಿಲ್ಲೆಗಳು ಕೃಷಿ ವಲಯದಲ್ಲಿ ಉತ್ತಮ ಸ್ಥಾನದಲ್ಲಿವೆ. ಆದರೂ ಸೇವಾ ಮತ್ತು ಕೈಗಾರಿಕೆ ವಲಯಗಳ ಪಾಲು ಕಡಿಮೆ ಇರುವ ಕಾರಣ, ಒಟ್ಟಾರೆ ಆಂತರಿಕ ಉತ್ಪನ್ನದಲ್ಲಿ ಹಿನ್ನಡೆಯಲ್ಲಿರುವುದು ಗಮನಾರ್ಹವಾಗಿದೆ ಎಂದು ಆರ್ಥಿಕ ಸಮೀಕ್ಷೆಯು ಹೇಳಿದೆ.

 

ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಖಾಸಗಿ ಕಾರ್ಪೋರೇಟ್ ವಲಯದ ಹೆಚ್ಚುವರಿ ಪಾಲು ಮತ್ತು ಲೆಕ್ಕಾಚಾರದಲ್ಲಿ ಹೊಸ ದತ್ತಾಂಶಗಳ ಲಭ್ಯತೆಯಿಂದ ಜಿಲ್ಲೆಗಳಿಗೆ ಹಂಚಿಕೆ ಮಾಡಬೇಕಾದ ಪ್ರತಿಯೊಂದು ವಲಯಕ್ಕೂ ಸಂಬಂಧಿಸಿದ ಸೂಕ್ತ ಭೌತಿಕ ಸೂಚಕಗಳನ್ನು ಗುರುತಿಸುವ ಪ್ರಕ್ರಿಯೆಯು ಮುಂದುವರೆದಿದೆ. ಈ ಕಾರಣದಿಂದ ಎಡು ಅವಧಿಗಳ ನಡುವಿನ ವಲಯವಾರು ಜಿಲ್ಲಾ ಅಂದಾಜುಗಳ ನೇರ ಹೋಲಿಕೆ ಹೆಚ್ಚು  ಪ್ರಯೋಜನಕಾರಿ ಆಗುವುದಿಲ್ಲ ಎಂದು ಸಮೀಕ್ಷೆಯು ವಿಶ್ಲೇಷಿಸಿದೆ.

ವಿಶೇಷವೆಂದರೇ 2025ರ ಮಳೆಗಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಮಳೆ ಪಡೆದಿತ್ತು. 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರಿನ ದ್ವಿತೀಯ ಮುಂಗಡ ಅಂದಾಜಿನ ಪ್ರಕಾರ ಒಟ್ಟು 107.1 ಲಕ್ಷ ಹೆಕ್ಟೇರ್‍‌ನಲ್ಲಿ ಬೆಳೆಯಿತ್ತು. ಕೃಷಿ ಯಾಂತ್ರಿಕರಣ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಭಾಗ್ಯ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಳಿಗೆ 568.78 ಕೋಟಿಗೂ ಅಧಿಕ ಮೊತ್ತ ವೆಚ್ಚವಾಗಿದೆ.

ಅಲ್ಲದೇ ರೈತರ ಆದಾಯವನ್ನು ಹೆಚ್ಚಿಸಲು ಕೃಷಿ ಸಂಸ್ಕರಣೆ ಮತ್ತು ಕೊಯ್ಲು ನಂತರದ ಚಟುವಟಿಕೆಗಳ ಮೂಲಕ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕವಾಗಿ ರಾಜ್ಯ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಿ ಮುಂಚೂಣಿಯಲ್ಲಿದೆ. ಸೆಕೆಂಡರಿ ಕೃಷಿ ಉದ್ದಿಮೆಗೆ ಸಂಬಂಧಿಸಿದ ಘಟಕಗಳನ್ನು ಸ್ಥಾಪಿಸಲು ಎಲ್ಲಾ ವರ್ಗದ ರೈತರಿಗೆ ಶೇ.50ರಷ್ಟು ಸಹಾಯಧನ ನೀಡಲಾಗಿದೆ.  ಆದರೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ 2025-25ಕ್ಕಿಂತಲೂ 2025-26ರಲ್ಲಿ ಕೊಡುಗೆ ಪಾಲು ಇಳಿಕೆಯಾಗಿದೆ.

ಕೃಷಿ ವಲಯಕ್ಕೆ ಜಿಲ್ಲಾವಾರು ಕೊಡುಗೆ

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಬಾಗಲಕೋಟೆ ಜಿಲ್ಲೆಯು ಕೃಷಿ ವಲಯಕ್ಕೆ 3.3ರಷ್ಟು ಕೊಡುಗೆ ನೀಡಿದೆ. ಬೆಂಗಳೂರು ನಗರವು 5.5, ಬೆಂಗಳೂರು ನಗರವು 2.1, ಬೆಳಗಾವಿಯು 6.8, ಬಳ್ಳಾರಿಯು 2.2,

 

ಬೀದರ್‍‌ 2.1, ವಿಜಯಪುರವು 4.9, ಚಾಮರಾಜನಗರವು 3.2, ಚಿಕ್ಕಬಳ್ಳಾಪುರವು 2.6, ಚಿಕ್ಕಮಗಳೂರು 2.8, ಚಿತ್ರದುರ್ಗವು 4.0, ದಕ್ಷಿಣ ಕನ್ನಡವು 3.3, ದಾವಣಗೆರೆ 3.9, ಧಾರವಾಡವು 1.7, ಗದಗ್ 1.2, ಕಲ್ಬುರ್ಗಿಯು 2.0,

ಹಾಸನ 4.1, ಹಾವೇರಿ 2.2, ಕೊಡಗು 2.8, ಕೋಲಾರ 3.0, ಕೊಪ್ಪಳವು 2.9, ಮಂಡ್ಯವು 5.0, ಮೈಸೂರು 5.0, ರಾಯಚೂರು 2.9, ಬೆಂಗಳೂರು ದಕ್ಷಿಣವು 2.9, ಶಿವಮೊಗ್ಗವು 4.9,

 

ತುಮಕೂರು 5.2, ಉಡುಪಿಯು 3.2, ಉತ್ತರ ಕನ್ನಡವು 2.5, ವಿಜಯನಗರವು 2.1, ಯಾದಗಿರಿ ಜಿಲ್ಲೆಯು 2.0ನಷ್ಟು  ಕೃಷಿ ವಲಯದಲ್ಲಿ ಕೊಡುಗೆ ನೀಡಿದೆ.

ಸೇವಾ ವಲಯವು ಒಟ್ಟು ಆಂತರಿಕ ಉತ್ಪನ್ನದಲ್ಲಿ ಅತೀ ಹೆಚ್ಚಿನ ಪಾಲು ಹೊಂದಿದೆ. 2024-25ರಲ್ಲಿ ಶೇ. 69.16ರಷ್ಟಿತ್ತು. 2025-26ರಲ್ಲಿ ಶೇ. 69.87ಕ್ಕೆ ಏರಿಕೆಯಾಗಿದೆ. 2025-26ನೇ ಸಾಲಿನಲ್ಲಿ ಸ್ಥಿರಾಸ್ತಿ, ವೃತ್ತಿಪರ ಸೇವೆಗಳು ಮತ್ತು ವಾಸಗೃಹಗಳ ಒಡೆತನ ವಲಯವು ಸೇ. 41.28ರೊಂದಿಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಗದಲ್ಲಿ ಅತೀ ಹೆಚ್ಚಿನ ಕೊಡುಗೆ ನೀಡಿದೆ.

2025-26ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಬೇಸಿಗೆ 2025ರ (ಡಿಸೆಂಬರ್‍‌ 31ರ ಅಂತ್ಯಕ್ಕೆ ) 6.49 ಲಕ್ಷ ಕ್ವಿಂಟಾಲ್ ಗುಣಮಟ್ಟದ ಬೀಜಗಳನ್ನು 12.62 ಲಕ್ಷ ರೈತರಿಗೆ ವಿತರಿಸಿತ್ತು. ಇದಕ್ಕಾಗಿ 171.74 ಕೋಟಿ ವೆಚ್ಚವಾಗಿದೆ. ಈ ಅವಧಿಯಲ್ಲಿ ರಸಗೊಬ್ಬರ ಲಭ್ಯತೆಯೂ ಸ್ಥಿರವಾಗಿದೆ ಎಂದು ಹೇಳಿರುವ ಆರ್ಥಿಕ ಸಮೀಕ್ಷೆಯು ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ್ದ 44.98 ಲಕ್ಷ ಟನ್ ಹಂಚಿಕೆಯಾಗಿತ್ತು. ಡಿಸೆಂಬರ್‍‌ 2025ರ ಅಂತ್ಯಕ್ಕೆ 38.73 ಲಕ್ಷ ಟನ್ ವಿವಿಧ ದರ್ಜೆಯ ರಸಗೊಬ್ಬರಗಳನ್ನು ರಾಜ್ಯವು ಸ್ವೀಕರಿಸಿತ್ತು ಎಂದು ವಿವರಿಸಿದೆ.

ಕೃಷಿ ಇಲಾಖೆಯು ವಿವಿಧ ಕೃಷಿ ಯಾಂತ್ರೀಕರಣ ಯೋಜನೆಗಳಡಿಯಲ್ಲಿ ರೈತರಿಗೆ ಸಹಾಯ ಧನ ನೀಡಿದೆ. ಕೃಷಿ ಯಾಂತ್ರೀಕರಣಕ್ಕಾಗಿ 388.18 ಕೋಟಿ ರು ಹಂಚಿಕೆ ಮಾಡಲಾಗಿತ್ತು. ಡಿಸೆಂಬರ್‍‌ 2025ರ ಅಂತ್ಯಕ್ಕೆ 333.53 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 298.19 ಕೋಟಿ ರು ವೆಚ್ಚವಾಗಿದೆ. ಈ ಯೋಜನೆಯಡಿ ರಾಜ್ಯಾದಾದ್ಯಂತ 1,30,454 ರೈತರು ಇದರ ಸೌಲಭ್ಯ ಪಡೆದಿದ್ದಾರೆ ಎಂದು ಮಾಹಿತಿ ಒದಗಿಸಿದೆ.

ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ 2025-26ರಲ್ಲಿ 440 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 383.04 ಕೋಟಿ ರು ಬಿಡುಗಡೆಯಾಗಿತ್ತು. ಡಿಸೆಂಬರ್‍‌ ಅಂತ್ಯಕ್ಕೆ 270.59 ಕೋಟಿರು ವೆಚ್ಚ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ 5,063 ಪ್ಯಾಕೇಜ್‌ಗಳನ್ನು ಕಾರ್ಯಗತಗೊಳಿಸಲು 100 ಕೋಟಿ ರು ಮತ್ತು ಕೃಷಿ ಭಾಗ್ಯ ಅಡಿಯಲ್ಲಿ 223 ತಾಲೂಕುಗಳಲ್ಲಿ ಅನುಷ್ಠಾನ ಮಾಡಲು 5,482 ಪ್ಯಾಕೇಜ್‌ಗಳಿಗೆ 100 ಕೋಟಿ ಹಂಚಿಕೆ ಮಾಡಲಾಗಿತ್ತು. 2025-26ರಲ್ಲಿ 175 ಕೋಟಿ ರು ಬಿಡುಗಡೆಯಾಗಿತ್ತು. ಡಿಸೆಂಬರ್‍‌ 2025ರ ಅಂತ್ಯಕ್ಕೆ 58.07 ಕೋಟಿ ಮಾತ್ರ ವೆಚ್ಚವಾಗಿದೆ. ಈ ಅವಧಿಯಲ್ಲಿ 4,529 ಕೃಷಿ ಹೊಂಡಗಳು ನಿರ್ಮಾಣವಾಗಿದೆ ಎಂದು ವಿವರಿಸಿದೆ.

ಹಾಗೆಯೇ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಡಿಸೆಂಬರ್ ರ ಅಂತ್ಯಕ್ಕೆ 25,76,338 ರೈತರು ದಾಖಲಾಗಿದ್ದರು. ಇವರಿಗೆ 223.24 ಕೋಟಿಯಷ್ಟು ಪ್ರೀಮಿಯಂ ಹಣ ಪಾವತಿಸಿದೆ. 22.64 ಲಕ್ಷ ಹೆಕ್ಟೇರ್ ವಿಸ್ತೀರ್ಣವು ಬೆಳೆ ವಿಮಾ ವ್ಯಾಪ್ತಿಗೆ ತಂದಿದೆ. 5,78,985 ರೈತರು ಇದರ ಫಲಾನುಭವಿಗಳಾಗಿದ್ದಾರೆ.

ವಿವಿಧ ಜಲಾನಯನ ಅಭಿವೃದ್ಧಿ ಯೋಜನೆಗಳಡಿಯಲ್ಲಿ 2025 ಮಾರ್ಚ್‌ ಅಂತ್ಯಕ್ಕೆ 74.94 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಗೊಳಿಸಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಜಲಾನಯನ ಅಭಿವೃದ್ಧಿ ಘಟಕ 2.0 ಅಡಿಯಲ್ಲಿ 34,855 ಹೆಕ್ಟೇರ್ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಿದೆ. 2,964 ಹೆಕ್ಟೇರ್ ಅರಣ್ಯ ಮತ್ತು 2,411 ಹೆಕ್ಟೇರ್ ಒಣಭೂಮಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಸಮೀಕ್ಷೆಯು ವಿವರಿಸಿದೆ.

2025ರ ಡಿಸೆಂಬರ್ ಅಂತ್ಯಕ್ಕೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ 4,39, 852.54 ಕೋಟಿ ರು ಮೌಲ್ಯದ 12.67 ಕೋಟಿ ಮೆಟ್ರಿಕ್ ಟನ್ ವಹಿವಾಟು ಆಗಿದೆ. 2025-26ನೇ ಸಾಲಿನಲ್ಲಿ ಬೆಂಬಲ ಯೋಜನೆಯಡಿ 88,252 ಲಕ್ಷ ಕ್ವಿಂಟಾಲ್ ಪ್ರಮಾಣದ ಹೆಸರುಕಾಳು, ಉದ್ದಿನಕಾಳು, ಸೂರ್ಯಕಾಂತಿ, ಸೋಯಾಬಿನ್, ಶೇಂಗಾ, ಮೆಕ್ಕೆಜೋಳ ಮತ್ತು ಹತ್ತಿ ಉತ್ಪನ್ನಗಳನ್ನು ಸುಮಾರು 1,55,793 ನೋಂದಾಯಿತ ರೈತರಿಮದ ಅಂದಾಜು 1,239 ಕೋಟಿ ಮೌಲ್ಯದಲ್ಲಿ ಖರೀದಿಸಿದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2025-26ನೇ ಸಾಲಿನ (ಡಿಸೆಂಬರ್ ವರೆಗೆ) 545.66 ಕೋಟಿ ಹಂಚಿಕೆ ಮಾಡಲಾಗಿತ್ತು. 30,653.66 ಹೆಕ್ಟೇರ್ ವಿಸ್ತೀರ್ಣದಲ್ಲಿ ಸೂಕ್ಷ್ಮ ನೀರಾವರಿ ಘಟಕ ಅಳವಡಿಸಲು 246.66 ಕೋಟಿ ಸಹಾಯಧನವನ್ನು 35,021 ರೈತರಿಗೆ ಒದಗಿಸಿದೆ.

ಹೀಗೆ ಕೃಷಿ ವಲಯಕ್ಕೆ ಸಾವಿರಾರು ಕೋಟಿ ರುಪಾಯಿ ಅನುದಾನವನ್ನು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ಸಹ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ವಲಯದಲ್ಲಿ ತನ್ನ ಕೊಡುಗೆಯನ್ನು ಹೆಚ್ಚಿಸುವುದರ ಬದಲಿಗೆ ಇಳಿಕೆ ಮಾಡಿಕೊಂಡಿದೆ.

 

Hot this week

ಕೇಂದ್ರ ತೆರಿಗೆಗಳ ಸಂಗ್ರಹದಲ್ಲಿ ರಾಜ್ಯದ ಪಾಲು ಕುಸಿತ; ಕರ್ನಾಟಕಕ್ಕೆ ತೀವ್ರ ಸವಾಲು ಒಡ್ಡಲಿದೆಯೇ?

ಬೆಂಗಳೂರು;  ಕೇಂದ್ರ ತೆರಿಗೆಗಳ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ  ರಾಜ್ಯ ಪಾಲು ಕುಸಿತವಾಗುತ್ತಿರುವ...

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

Topics

ಕೇಂದ್ರ ತೆರಿಗೆಗಳ ಸಂಗ್ರಹದಲ್ಲಿ ರಾಜ್ಯದ ಪಾಲು ಕುಸಿತ; ಕರ್ನಾಟಕಕ್ಕೆ ತೀವ್ರ ಸವಾಲು ಒಡ್ಡಲಿದೆಯೇ?

ಬೆಂಗಳೂರು;  ಕೇಂದ್ರ ತೆರಿಗೆಗಳ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ  ರಾಜ್ಯ ಪಾಲು ಕುಸಿತವಾಗುತ್ತಿರುವ...

ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್‌ ಪತ್ರ

ಬೆಂಗಳೂರು;  ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್‌ ಅಂಡ್‌ ಅಲೈಡ್‌ ಇಂಜಿನಿಯರಿಂಗ್‌...

ಅಂಬೇಡ್ಕರ್ ಆಶಾಕಿರಣ ಯೋಜನೆ ಜಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 50 ಪೈಸೆ ಸುಂಕ; ಪ್ರಸ್ತಾವ

ಬೆಂಗಳೂರು; ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪ್ರತಿ ಲೀಟರ್ ಮೇಲೆ 50 ಪೈಸೆಯಂತೆ...

ಸಾಲಬಾಧ್ಯತೆ: 33 ವರ್ಷಗಳಲ್ಲಿ 87 ಪಟ್ಟು ಹೆಚ್ಚಳ, ಬಿಜೆಪಿ ಅವಧಿಯಲ್ಲೇ 5,351.57 ಶತಕೋಟಿಗೆ ಏರಿಕೆ

ಬೆಂಗಳೂರು; ರಾಜ್ಯದ ಒಟ್ಟು ಸಾಲಬಾಧ್ಯತೆಯು ಕಳೆದ ಮೂರು ದಶಕಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಲೇ...

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಬೆಂಗಳೂರು;  850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌...

ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀ ದೋಷಮುಕ್ತ; ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಕೆಗೆ ಅನುಮೋದನೆ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

ವಿಪತ್ತು ಅಪಾಯ ತಡೆಗಟ್ಟುವ ನಿಧಿ; ಬಹುಕೋಟಿ ಬಳಕೆಗೆ ಪ್ರಮಾಣಪತ್ರವೇ ಸಲ್ಲಿಸದ ರಾಜ್ಯ

ಬೆಂಗಳೂರು; ವಿಪತ್ತುಗಳ ಅಪಾಯವನ್ನು ತಡೆಗಟ್ಟುವುದು ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ...

ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ

ಬೆಂಗಳೂರು;  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ...

Related Articles

Popular Categories

spot_imgspot_img
error: Content is protected !!