Saturday | March 14, 2026 |

ಅರಣ್ಯ ಜಮೀನಿನ ಖಾತೆ ಬದಲಾವಣೆ, ಅಸಮರ್ಪಕ ವರದಿ; ತಡವಾಗಿ ವಿಚಾರಣೆ, ನೋಟೀಸ್ ಜಾರಿ

Support THE-FILE

spot_img

ಬೆಂಗಳೂರು; ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಅಂದಾಜು 500 ಕೋಟಿ ರು.ಗೂ ಹೆಚ್ಚು ಮೌಲ್ಯದ 17.34 ಎಕರೆ ಜಮೀನನ್ನು ಸರ್ಕಾರಿ ಕಂದಾಯ ಭೂಮಿ ಎಂದು ಬದಲಿಸಿರುವ ಪ್ರಕರಣದಲ್ಲಿ ಕೆ ಎ ಎಸ್ ಅಧಿಕಾರಿ ಡಾ ಎಂ ಜಿ ಶಿವಣ್ಣ ಅವರಿಗೆ ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದೆ.

ಅರಣ್ಯ ಇಲಾಖೆಗೆ ಸೇರಿದ್ದ 17.34 ಎಕರೆ ವಿಸ್ತೀರ್ಣದ ಜಮೀನನ್ನು  ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸರ್ಕಾರಿ ಕಂದಾಯ ಭೂಮಿ ಎಂದು ಬದಲಿಸಿದ್ದ ಪ್ರಕರಣದಲ್ಲಿ  ಹಿಂದಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಬಸವರಾಜು ಮತ್ತಿತರರ ಹೆಸರು ಕೇಳಿ ಬಂದಿದ್ದವು. ಆದರೆ ಈ ಪ್ರಕರಣದ ವಿಚಾರಣೆಗೆ ಬಿರುಸಿನ ಚಾಲನೆ ದೊರೆತಿರಲಿಲ್ಲ. ಈಗಲೂ ಸಹ ಈ ಪ್ರಕರಣದ ವಿಚಾರಣೆಯು ತೆವಳುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್‌ ಜಾರಿ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದೆ.

2026ರ ಜನವರಿ 27ರಂದೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬೆಂಗಳೂರು ಉತ್ತರ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ ಎಂ ಜಿ ಶಿವಣ್ಣ ಅವರಿಗೆ ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ನೋಟೀಸ್‌ನಲ್ಲೇನಿದೆ?

ಬೆಂಗಳೂರು ಪೂರ್ವ ತಾಲೂಕು ಕೆ ಆರ್ ಪುರಂ ಹೋಬಳಿ ಕೊತ್ತನೂರು ಗ್ರಾಮದ ಸರ್ವೆ ನಂಬರ್‍‌ 47ರ ಪೈಕಿ ಅರಣ್ಯ ಇಲಾಖೆಗೆ ಸೇರಿದ 17 ಎಕರೆ 34 ಗುಂಟೆ ವಿಸ್ತೀರ್ಣದ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಉಚ್ಛ ನ್ಯಾಯಾಲಯದ ಆದೇಶಗಳಲ್ಲಿ ಅಂತಿಮ ತೀರ್ಮಾನವಾಗಿತ್ತು. ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ಸಲ್ಲಿಸಿದ್ದ ಅಸಮರ್ಪಕ ವರದಿಯನ್ನು ಪರಿಶೀಲಿಸದೇ ಖಾತೆ ಬದಲಾವಣೆ ಮಾಡಲು ಆದೇಶ ಹೊರಡಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ  ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 11 ಮ್ತು 13ರ ಅಡಿ ಇಲಾಖೆ ವಿಚಾರಣೆ ನಡೆಸಲು ಸರ್ಕಾರವು ಉದ್ದೇಶಿಸಿದೆ ಎಂದು ನೋಟೀಸ್‌ನಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

 

ಇದೇ ನೋಟಿಸ್‌ನಲ್ಲಿ ಈ ಆರೋಪಕ್ಕೆ ಪೂರಕವಾಗಿ ದೋಷಾರೋಪಣೆ ಪಟ್ಟಿ ಮತ್ತು ಆರೋಪ ಸಮರ್ಥಿಸುವ ದಾಖಲೆಗಳ ಪಟ್ಟಿ, ಸಾಕ್ಷಿದಾರರ ಪಟ್ಟಿಯನ್ನು ನೀಡಿದೆ. ಈ ಆರೋಪಗಳ ಕುರಿತು ನಿಗದಿತ ಅವಧಿಯಲ್ಲಿ ಸಮರ್ಥನೆ ಮತ್ತು ರಕ್ಷಣಾ ಹೇಳಿಕೆ ನೀಡದಿದ್ದಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಎಚ್ಚರಿಸಿರುವುದು ತಿಳಿದು ಬಂದಿದೆ.

 

 

ಭೂಮಿ ದಾಖಲೆಗಳಲ್ಲಿ ಸದ್ಯ  ಈ ಜಮೀನು ಸೈಯದ್ ರಹಮತ್ ಉಲ್ಲಾ, ಸೈಯದ್ ಬಸೀರ್, ಪಿ ಚಿ ತಂಬಿ, ಸೂಸಮ್ಮ ತಂಬಿ, ಎಂ ತಿಪ್ಪಯ್ಯ,

 

 

ಸರ್ಕಾರಿ ಗೋಮಾಳ ಅರಣ್ಯ ಇಲಾಖೆಗೆ ವಹಿಸಿದೆ ಎಂದು ನಮೂದಾಗಿದೆ.

 

 

ಆರಂಭದಲ್ಲೇ ಮೈಮರೆತಿದ್ದ ಅರಣ್ಯ ಇಲಾಖೆ

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಬಂಧ ಸಭೆ ನಡೆದಿತ್ತು. ಆಗ ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರೂ ಸಭೆಯಲ್ಲಿ ಭಾಗವಹಿಸಿದ್ದರು.   ಈ  ಸಭೆಯಲ್ಲಿಯೇ ಕೈಗೊಂಡಿದ್ದ ನಿರ್ಣಯದ ಪ್ರಕಾರ  ಅರಣ್ಯ ಇಲಾಖೆಗೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಸರ್ಕಾರಿ ಕಂದಾಯ ಭೂಮಿ ಎಂದು ಬದಲಿಸಲು ತೀರ್ಮಾನವಾಗಿತ್ತು. ಅಲ್ಲದೇ ಉಪ ವಿಭಾಗಾಧಿಕಾರಿಯಾಗಿದ್ದ  ಡಾ ಎಂ ಜಿ ಶಿವಣ್ಣ ಹಾಗೂ  ಹಾಗೂ ತಹಶೀಲ್ದಾರ್‍‌ ಅಜಿತ್‌ ಕುಮಾರ್‍‌ ರೈ ಅವರು ಕಂದಾಯ ಭೂಮಿ ಎಂದು ದಾಖಲೆ ಬದಲಿಸಲು ಮುಂದಾಗಿದ್ದರು. ಆ ಸಂದರ್ಭದಲ್ಲಿಯೂ  ಅರಣ್ಯ ಇಲಾಖೆಯೂ ಮೈಮರೆತಿತ್ತು.

 

ತದನಂತರ ಈ ಪ್ರಕರಣದ ಬಗ್ಗೆ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿತ್ತು.  ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮ್ಯುಟೇಷನ್‌ ಮಾಡಿರುವ ಪ್ರಕರಣದಲ್ಲಿ ಇವರಿಬ್ಬರ ವಿರುದ್ಧ ಅರಣ್ಯ ಕಾಯ್ದೆ ವಿರುದ್ಧ ಮೊಕದ್ದಮೆ ದಾಖಲಿಸಲು ಕೋರಿ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ವಿಜಯ್‌ ಶರ್ಮ ಅವರು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2023ರ ಅಕ್ಟೋಬರ್‍‌ 12ರಂದು ಪತ್ರ ಬರೆದಿದ್ದರು.

 

 

 

 

ಈ ಪ್ರಕರಣದಲ್ಲಿ ಕೇವಲ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸುವುದರಲ್ಲಿಯೇ ಕಾಲಹರಣ ಮಾಡಲಾಗುತ್ತಿದೆಯೇ ವಿನಃ ಕಠಿಣ ಕ್ರಮ ಜರುಗಿಸಿಲ್ಲ.

 

ಪ್ರಕರಣದ ವಿವರ

ಬೆಂಗಳೂರು ಪೂರ್ವ ತಾಲೂಕಿನ ಕೆ ಆರ್‍‌ ಪುರಂ ಹೋಬಳಿಯ ಕೊತ್ತನೂರು ಗ್ರಾಮದ ಸರ್ವೆ ನಂಬರ್‍‌ 47ರಲ್ಲಿ 17-34 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿತ್ತು. ಇದನ್ನು ಅರಣ್ಯ ಇಲಾಖೆಯ ಹೆಸರಿನಲ್ಲಿ ಎಂ ಆರ್‍‌ 06/99-2000 ಎಂದು ದಾಖಲೆಗಳಲ್ಲೂ ನಮೂದಾಗಿತ್ತು.

ಆ ನಂತರ ಕೆ ಆರ್‍‌ ಪುರಂ ತಹಶೀಲ್ದಾರ್‍‌ ಅಜಿತ್‌ ಕುಮಾರ್‍‌ ರೈ ಮತ್ತು ಉಪ ವಿಭಾಗಾಧಿಕಾರಿ ಅವರು ಭಾರತ ಸರ್ಕಾರದ ಅರಣ್ಯ ಸಚಿವಾಲಯದ ಪೂರ್ವಾನುಮತಿ ಇಲ್ಲದೆಯೇ ಖಾಸಗಿ ವ್ಯಕ್ತಿಗಳಿಗೆ ಮ್ಯುಟೇಷನ್‌ ಮಾಡಿಕೊಟ್ಟಿದ್ದರು.

 

 

 

 

 

ಹಿಂದಿನ ಅರಣ್ಯ ಸಚಿವರ ಪಾತ್ರವೇನು?

ಕೊತ್ತನೂರು ಗ್ರಾಮದ ಸರ್ವೆ ನಂಬರ್‍‌ 47ರಲ್ಲಿ 17-34 ಎಕರೆ ಜಮೀನಿನ ದಾಖಲೆಗಳಲ್ಲಿ ಅರಣ್ಯ ಇಲಾಖೆ ಎಂದು ನಮೂದಾಗಿರುವುದನ್ನು ರದ್ದುಪಡಿಸಿ ಅದನ್ನು ಸರ್ಕಾರ ಎಂದು ನಮೂದಿಸುವ ಸಂಬಂಧ 2021ರ ನವೆಂಬರ್‍‌ 24ರಂದು ಅಂದಿನ ಅರಣ್ಯ ಸಚಿವರೇ ಪತ್ರ ಬರೆದಿದ್ದರು. ಅಲ್ಲದೇ ಹಿಂದಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಬಸವರಾಜು ಅವರೂ ಜಂಟಿ ಸಭೆ ನಡೆಸಿದ್ದರು.

ಕೊತ್ತನೂರು ಗ್ರಾಮದ ಸರ್ವೆ ನಂಬರ್‍‌ 47ರಲ್ಲಿನ 17-34 ಎಕರೆ ಜಮೀನು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿತ್ತು. ಇದು ಸರ್ಕಾರಿ ಗೋಮಾಳ ಎಂದು ವರ್ಗೀಕೃತ ಜಮೀನಾಗಿತ್ತು. ಆಕಾರ್‍‌ಬಂದ್‌ ನಂತೆ ಒಟ್ಟು ವಿಸ್ತೀರ್ಣ 53.20 ಎಕರೆ ಇದೆ. ಈ ಸರ್ವೆ ನಂಬರ್‍‌ನಲ್ಲಿ ಪೋಡಿಯಾಗಿ ದುರಸ್ತಾದಂತಹ ಹೊಸ ಸರ್ವೆ ನಂಬರ್‍‌ 60, 61, 62 ಮತ್ತು 63ಗಳಾಗಿ ವಿಲೇಗೊಂಡಿತ್ತು.

 

 

 

ಹಾಲಿ ಪಹಣಿಯಂತೆ 38-28 ಎಕರೆ ವಿಸ್ತೀರ್ಣವಿದೆ. ಪಹಣಿ ಕಾಲಂ 3 ಮತ್ತು 9ಕ್ಕೆ ವಿಸ್ತೀರ್ಣ ತಾಳೆ ಇದೆ. ಕೆ ಆರ್‍‌ಪುರಂ ಹೋಬಳಿ ಕೊತ್ತನೂರು ಗ್ರಾಮದ ಸರ್ವೆ ನಂಬರ್‍‌ 47ರಲ್ಲಿನ ಪಹಣಿಯಂತೆ 17034 ಎಕರೆ ಜಮೀನು ಅರಣ್ಯ ಇಲಾಖೆಗೆ 1999-2000ರಲ್ಲಿದ್ದ ಬೆಂಗಳೂರಿನ ಅಂದಿನ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಖಾತೆ ಆಗಿತ್ತು. ಇನ್ನುಳಿದ 3 ಎಕರೆ ಸರ್ಕಾರಿ ಗೋಮಾಳವಾಗಿದೆ.

ಸರ್ವೆ ನಂಬರ್‍‌ 47ರಲ್ಲಿ ಮಾಜಿ ಸೈನಿಕರು, ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಗಳನ್ನು ವಜಾಗೊಳಿಸಲಾಗಿತ್ತು. ಅಲ್ಲದೇ ಇದೇ ಸರ್ವೆ ನಂಬರ್‍‌ನಲ್ಲಿ 40-50 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡಿದ್ದರು. ಅರ್ಜಿ ಸಲ್ಲಿಸಿದ್ದವರೇ ಮನೆಗಳನ್ನು ಕಟ್ಟಿಕೊಂಡು ವಾಸವಿದ್ದರು ಎಂಬುದು ಕಂದಾಯ ದಾಖಲೆಗಳಿಂದ ತಿಳಿದು ಬಂದಿದೆ.

ಅರಣ್ಯ ಇಲಾಖೆಗೆ ಮಂಜೂರಾಗಿ ಹಸ್ತಾಂತರವಾಗಿದ್ದರೂ ಈ ಸಂಬಂಧ ತಹಶೀಲ್ದಾರ್‍‌ ಕಚೇರಿಯ ಕಡತದಲ್ಲಿ ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ. ಹಾಗೂ ಮಂಜೂರಾಗಿರುವ ಸಂಬಂಧದ ದಾಖಲೆಗಳನ್ನು ಅರಣ್ಯ ಇಲಾಖೆಯೂ ಸಲ್ಲಿಸಿರಲಿಲ್ಲ ಎಂಬುದು ಗೊತ್ತಾಗಿದೆ.

 

 

 

ಈ ಅರಣ್ಯ ಪ್ರದೇಶವನ್ನು ನಕಾಶೆಯಲ್ಲಿ ಗುರುತಿಸಿ ಹದ್ದುಬಸ್ತನ್ನು ನಿಗದಿಪಡಿಸಿತ್ತು. ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸ್ವಾಧೀನದಲ್ಲಿತ್ತು. ಈ ಜಮೀನು ಹೊರತುಪಡಿಸಿ ಉಳಿದ ಪ್ರದೇಶ ಕಂದಾಯ ಇಲಾಖೆಯ ಸುಪರ್ದಿಯಲ್ಲಿತ್ತು. ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ.

 

 

 

 

ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಮೀನಿನ ಮೇಲೆ ಅರಣ್ಯ ಇಲಾಖೆಯಿಂದ ಯಾವುದೇ ನಿರ್ಬಂಧಗಳಿಲ್ಲ ಎಂದೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೂ ವಿವರಣೆ ನೀಡಿದ್ದರು.

ಎಂ ಜಿ ಶಿವಣ್ಣ ವಿರುದ್ಧ ಅಸಮಂಜಸವಾದ ದೋಷಾರೋಪಣೆ ಪಟ್ಟಿ

ಕೆಎಎಸ್‌ ಅಧಿಕಾರಿ ಎಂ ಜಿ ಶಿವಣ್ಣ ಅವರಿಗೆ ಬೇರೊಂದು ಪ್ರಕರಣದಲ್ಲಿಯೂ ನೋಟೀಸ್‌ ಜಾರಿಗೊಳಿಸಿತ್ತು. 2025ರ ಮಾರ್ಚ್‌ನಲ್ಲಿ ನೋಟೀಸ್‌ ಕಳಿಸಿದ್ದ  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆಪಾದಿತ ಅಧಿಕಾರಿ ಎಂ ಜಿ ಶಿವಣ್ಣ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಮಂಜಸವಾಗಿ ದೋಷಾರೋಪಣೆ ಪಟ್ಟಿಯನ್ನೇ ಹೊರಡಿಸಿರಲಿಲ್ಲ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿತ್ತು.

 

 

ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ದೊಡ್ಡ ತೋಗೋರು ಗ್ರಾಮದ ಸರ್ವೆ ನಂಬರ್ 152/1 (ಹೊಸ ಸರ್ವೆ ನಂಬರ್ 152/6) ಜಮೀನಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು (K-SC-ST (5)15/19-200) ದಾಖಲಾಗಿತ್ತು.  ಆದರೆ ನ್ಯಾಯಾಲಯದಲ್ಲಿ ಕಡತಗಳಲ್ಲಿರುವ ಅಂಶಗಳು ಏನು ಎಂಬುದು ತಿಳಿದು ಬಂದಿರಲಿಲ್ಲ. ಅಲ್ಲದೇ ಅರ್ಜಿದಾರರಿಗೆ ಮಂಜೂರಾಗಿದ್ದ ಜಮೀನಿನ ಪೈಕಿ ಮೂಲ ಸರ್ಕಾರಿ ಜಮೀನು ಯಾವುದು ಹಾಗೂ ಯಾವ ಅರ್ಜಿದಾರರಿಗೆ, ವಾರಸುದಾರರಿಗೆ ಮಂಜೂರಾಗಿದೆ ಎಂಬ ಕುರಿತಾದ ಮಾಹಿತಿ, ದಾಖಲೆಗಳನ್ನೂ ಉಲ್ಲೇಖಿಸಿರಲಿಲ್ಲ ಎಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿತ್ತು.

ಅದೇ ರೀತಿ ಉಪ ವಿಭಾಗಾಧಿಕಾರಿಗಳು ಕೇವಲ ಭೌತಿಕ ಸ್ವಾಧೀನ  ನೀಡಿರುವ ಬಗ್ಗೆ ಆದೇಶ ಮಾಡಿದ್ದಾರೆಯೇ ಹಾಗೂ ಜಮೀನಿನಲ್ಲಿರುವ ಮನೆಗಳನ್ನು ಧ್ವಂಸ ಮಾಡಲು ಆದೇಶ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಮಾಹಿತಿ ಇರಲಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತನ್ನ ಬಳಿ ಲಭ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿತ್ತು. ಜಮೀನನ್ನು ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಿದ್ದರು ಎಂದು ಇಲಾಖೆಯ ಪರಿಶೀಲನೆ ವೇಳೆ ಕಂಡುಕೊಂಡಿತ್ತು.  ಅಲ್ಲದೇ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡಿದ್ದರೂ ಸಹ ಇದರ ಬಗ್ಗೆ ಎಲ್ಲಿಯೂ ಉಲ್ಲೇಖಿಸಿರಲಿಲ್ಲ ಎಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಲಾಗಿತ್ತು.

ಅಲ್ಲದೇ ಎಂ ಜಿ ಶಿವಣ್ಣ ಅವರ ವಿರುದ್ಧ ಹೊರಡಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ (ಅನುಬಂಧ 3) ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯದ ಆದೇಶಗಳ ದಾಖಲೆಗಳನ್ನು  ಮಾತ್ರ ವರ್ಗೀಕರಿಸಲಾಗಿತ್ತು. ಆದರೆ ಸರ್ವೋಚ್ಛ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಪ್ರಕರಣ ಉದ್ಭವಿಸಲು ಕಾರಣಗಳೇನು, ಕಂದಾಯ ಅಧಿಕಾರಿಗಳು ಮತ್ತು ವಿವಿಧ ನ್ಯಾಯಾಲಯಗಳಲ್ಲಿ ಹೊರಡಿಸಿರುವ ಆದೇಶಗಳು ಮತ್ತು ಇದಕ್ಕೆ ಸಂಬಂಧಿಸಿದ ಕಡತಗಳು ಸಹ ಇರಲಿಲ್ಲ. ಹಾಗೆಯೇ ದೋಷಾರೋಪಣೆ ಪಟ್ಟಿಯಲ್ಲಿರುವ ಆರೋಪಗಳನ್ನು ಸಾಬೀತುಪಡಿಸಲು ಸರಿಯಾದ ಸಾಕ್ಷಿದಾರರನ್ನೂ ಸಹ ಗುರುತಿಸಿರಲಿಲ್ಲ  ಎಂದು ಟಿಪ್ಪಣಿಯಲ್ಲಿ ಗಮನಸೆಳೆದಿದೆ.

ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿತ್ತು. ಹಾಲಿ ತಯಾರಿಸಿದ್ದ ಆರೋಪ ಪಟ್ಟಿ, ಅನುಬಂಧ -2 ಹಾಗೂ 3ರಲ್ಲಿ ಸೂಚಿಸಿದ್ದ ದಾಖಲೆಗಳು, ಅನುಬಂಧ-4 ರಲ್ಲಿನ ಸಾಕ್ಷಿದಾರರ ಪಟ್ಟಿಯನ್ನು ಪರಿಶೀಲಿಸಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಮರು ಪರಿಶೀಲಿಸುವ ಅಗತ್ಯವಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೇಳಿತ್ತು.

 

 

‘ಈ ಪ್ರಕರಣದಲ್ಲಿ ಉನ್ನತಾಧಿಕಾರಿಗಳು ಸಂಪೂರ್ಣವಾಗಿ ಎಲ್ಲಾ ಕಡತಗಳನ್ನು ಪರಿಶೀಲಿಸಿ ದೋಷಾರೋಪಣೆ ಪಟ್ಟಿಯನ್ನು ತಯಾರಿಸುವುದು ಸಮಂಜಸ,’ ಎಂದು ಕಂಡುಬಂದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸೂಚಿಸಿತ್ತು. ಅಲ್ಲದೇ ಈ ಪ್ರಕರಣದ ಮೇಲುಸ್ತುವಾರಿಯನ್ನು ಕಂದಾಯ ಇಲಾಖೆಯ ಆಯುಕ್ತರಿಗೆ ವಹಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆರೋಪ ಪಟ್ಟಿ ತಯಾರಿಸಬೇಕು. ಅಲ್ಲದೇ ಸರಿಯಾದ ಸಾಕ್ಷಿಗಳನ್ನು ಗುರುತಿಸಬೇಕು.ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಪರಿಷ್ಕೃತ ಆರೋಪ ಪಟ್ಟಿಯನ್ನು ಮೂಲ ಕಡತ ಮತ್ತು ದಾಖಲೆಗಳನ್ನು ಸಲ್ಲಿಸಬೇಕು ಎಂದು 2025ರ ಜೂನ್‌ 13, ಸೆ.6 ರಂದು ಇಲಾಖೆಯು ಕೋರಿತ್ತಾದರೂ ಕಂದಾಯ ಇಲಾಖೆಯು ಈ ಬಗ್ಗೆ ಯಾವುದೇ ಮಾಹಿತಿಯನ್ನು ಸಲ್ಲಿಸಿರಲಿಲ್ಲ.

Hot this week

ಸಾಮಾಜಿಕ ಭದ್ರತಾ ಯೋಜನೆ; ಖರ್ಚಾಗದ ಪೂರ್ಣ ಅನುದಾನ, 676.16 ಕೋಟಿ ಉಳಿಕೆ

ಬೆಂಗಳೂರು; ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟಾರೆ 12 ಸಾಮಾಜಿಕ ಭದ್ರತಾ...

ಎಪಿಎಂಸಿಯಲ್ಲಿ ಅಕ್ರಮ; ನಿಯಮಬಾಹಿರವಾಗಿ 2,132 ಕಮಿಷನ್ ಏಜೆಂಟ್ ಲೈಸೆನ್ಸ್ ಮಂಜೂರು,

ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ  ಸ್ವಂತ ಪ್ರಾಂಗಣ ಹೊಂದದೇ ಇದ್ದರೂ ಸಹ...

ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕು 10,000 ಕೋಟಿ ಹೆಚ್ಚುವರಿ ಅನುದಾನ; ಸಚಿವ ಸಂಪುಟಕ್ಕೆ ಪ್ರಸ್ತಾವ

ಬೆಂಗಳೂರು; ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ  ಒಟ್ಟು 72 ಪ್ರಮುಖ...

ಸರ್ಕಾರಿ ಜಮೀನು ಭೂಗಳ್ಳರ ಪಾಲು; ಪಿ ನಂಬರ್ ದುರಸ್ತಿ ಹೆಸರಿನಲ್ಲಿ ಅಕ್ರಮ, ತಹಶೀಲ್ದಾರ್‍‌ಗಳೇ ಭಾಗಿ, ಕ್ರಮವೇ ಇಲ್ಲ

ಬೆಂಗಳೂರು;  ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದಲ್ಲಿನ...

7ನೇ ವೇತನ ಆಯೋಗ ಶಿಫಾರಸ್ಸು; ಬದ್ಧ ವೆಚ್ಚದಲ್ಲಿ ಹೆಚ್ಚಳ, 15,000 ಕೋಟಿಯಿಂದ 20,000 ಕೋಟಿಗೆ ಏರಿಕೆ

ಬೆಂಗಳೂರು;  7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ  ಮುಂಬರುವ ವರ್ಷಗಳಲ್ಲಿ ಬದ್ಧ...

Topics

ಸಾಮಾಜಿಕ ಭದ್ರತಾ ಯೋಜನೆ; ಖರ್ಚಾಗದ ಪೂರ್ಣ ಅನುದಾನ, 676.16 ಕೋಟಿ ಉಳಿಕೆ

ಬೆಂಗಳೂರು; ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸೇರಿದಂತೆ ಒಟ್ಟಾರೆ 12 ಸಾಮಾಜಿಕ ಭದ್ರತಾ...

ಎಪಿಎಂಸಿಯಲ್ಲಿ ಅಕ್ರಮ; ನಿಯಮಬಾಹಿರವಾಗಿ 2,132 ಕಮಿಷನ್ ಏಜೆಂಟ್ ಲೈಸೆನ್ಸ್ ಮಂಜೂರು,

ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ  ಸ್ವಂತ ಪ್ರಾಂಗಣ ಹೊಂದದೇ ಇದ್ದರೂ ಸಹ...

ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕು 10,000 ಕೋಟಿ ಹೆಚ್ಚುವರಿ ಅನುದಾನ; ಸಚಿವ ಸಂಪುಟಕ್ಕೆ ಪ್ರಸ್ತಾವ

ಬೆಂಗಳೂರು; ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ  ಒಟ್ಟು 72 ಪ್ರಮುಖ...

ಸರ್ಕಾರಿ ಜಮೀನು ಭೂಗಳ್ಳರ ಪಾಲು; ಪಿ ನಂಬರ್ ದುರಸ್ತಿ ಹೆಸರಿನಲ್ಲಿ ಅಕ್ರಮ, ತಹಶೀಲ್ದಾರ್‍‌ಗಳೇ ಭಾಗಿ, ಕ್ರಮವೇ ಇಲ್ಲ

ಬೆಂಗಳೂರು;  ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಹೋಬಳಿ ಸಂಪಂಗೆರೆ ಗ್ರಾಮದಲ್ಲಿನ...

7ನೇ ವೇತನ ಆಯೋಗ ಶಿಫಾರಸ್ಸು; ಬದ್ಧ ವೆಚ್ಚದಲ್ಲಿ ಹೆಚ್ಚಳ, 15,000 ಕೋಟಿಯಿಂದ 20,000 ಕೋಟಿಗೆ ಏರಿಕೆ

ಬೆಂಗಳೂರು;  7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದಲ್ಲಿ  ಮುಂಬರುವ ವರ್ಷಗಳಲ್ಲಿ ಬದ್ಧ...

ವಿಚಾರಣೆಗಳಿಗೆ ಹಾಜರಾಗದಿದ್ದರೂ ಸಂಭಾವನೆ ಕೋರಿದ ಪಬ್ಲಿಕ್ ಪ್ರಾಸಿಕ್ಯೂಟರ್ಸ್‌: 590 ಪ್ರಕರಣ ಪತ್ತೆ

ಬೆಂಗಳೂರು; ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ...

ಹುದ್ದೆಗಳ ಸಂಖ್ಯೆಯಲ್ಲಿ ಗಣನೀಯ ಕಡಿತ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು; ವಿವಿಗಳ ಅಭಿಪ್ರಾಯ ಬಹಿರಂಗ

ಬೆಂಗಳೂರು; ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ  ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸಿದ್ದಲ್ಲಿ ...

ದೇಶದ್ರೋಹಿ ಘೋಷಣೆ, ದೇಶ ವಿರೋಧಿ ಚಟುವಟಿಕೆ; 24 ಪ್ರಕರಣಗಳಲ್ಲಿ 3 ಬಿ ರಿಪೋರ್ಟ್

ಬೆಂಗಳೂರು; ದೇಶದ್ರೋಹಿ ಘೋಷಣೆ ಕೂಗಿದ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ  ಕಳೆದ ಮೂರು...

Related Articles

Popular Categories

error: Content is protected !!