ಖನಿಜ ಸಾಗಣೆಗೆ ಶುಲ್ಕ; ಬಿಜೆಪಿ ಸರ್ಕಾರದಿಂದ ಸಂವಿಧಾನದ ವಿಧಿ ಉಲ್ಲಂಘನೆ

ಬೆಂಗಳೂರು; ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಸಾಗಿಸುವ ಜಲ್ಲಿ, ಕಲ್ಲು, ಎಂ ಸ್ಯಾಂಡ್‌ ಸೇರಿದಂತೆ ಇನ್ನಿತರೆ ಉಪ ಖನಿಜಗಳಿಗೆ ಶುಲ್ಕ ಸಂಗ್ರಹಿಸುವ ಸಂಬಂಧ ಬಿಜೆಪಿ ಸರ್ಕಾರ ಸಂವಿಧಾನದ 301ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಹೇಳಿರುವ ಹೈಕೋರ್ಟ್‌, ಯಾವುದೇ ಕಾನೂನನ್ನು ಜಾರಿಗೊಳಿಸದೆಯೇ ತಂದಿದ್ದ ತಿದ್ದುಪಡಿಯನ್ನು ಅನೂರ್ಜಿತಗೊಳಿಸಿದೆ. ಬಿಜೆಪಿ ಸರ್ಕಾರಕ್ಕೆ ಸಂವಿಧಾನದ ತಿಳಿವಳಿಕೆಯೇ ಇಲ್ಲ ಎಂದು ಕೇಳಿ ಬರುತ್ತಿರುವ ಮಾತುಗಳನ್ನು ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶವು ಬಲಪಡಿಸಿದಂತಾಗಿದೆ.

ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಉಪ ಖನಿಜಗಳಿಗೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಹಾಗಾಗಿ ಸದರಿ ತಿದ್ದುಪಡಿಯನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿಗಳಾದ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

ಶ್ರೀ ಸಾಯಿ ಕೇಶವ ಎಂಟರ್‌ಪ್ರೈಸೆಸ್‌ ಮತ್ತು ಇತರರು ವಿರುದ್ದ ಕರ್ನಾಟಕ ರಾಜ್ಯ ಮತ್ತು ಇತರರು ಸಲ್ಲಿಸಿದ್ದ ರಿಟ್ ಅರ್ಜಿ 8851/2020 ಮತ್ತು ಇತರೆ ಪ್ರಕರಣಗಳ ಕುರಿತು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಪ್ರಕಟಿಸಿದೆ.

“ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994 ರ ನಿಯಮ 42 ರ ಉಪ ನಿಯಮ (7) ಅನ್ನು ಜಾರಿಗೆ ತರಲು ರಾಜ್ಯ ಶಾಸಕಾಂಗವು, ಶಾಸಕಾಂಗ ಸಾಮರ್ಥ್ಯವನ್ನು ಹೊಂದಿದೆಯೇ, ಮತ್ತು ಇತರ ರಾಜ್ಯಗಳಿಂದ ಕೆಲವು ವರ್ಗದ ಉಪ ಖನಿಜಗಳನ್ನು, ಅಧೀಕೃತ ಸಾರಿಗೆ ಪರವಾನಗಿಯೊಂದಿಗೆ ಕರ್ನಾಟಕ ರಾಜ್ಯಕ್ಕೆ ಸಾಗಿಸುವ ವ್ಯಕ್ತಿಯಿಂದ ಪ್ರವೇಶ ಶುಲ್ಕವನ್ನು ಸಂಗ್ರಹಿಸಲು ಅನುಮತಿ ನೀಡುತ್ತದೆಯೇ ಎಂದು ಅರ್ಜಿದಾರರು ರಿಟ್‌ ಅರ್ಜಿಯಲ್ಲಿ ಪ್ರಶ್ನಿಸಿದ್ದರು.

ಪಟ್ಟಿ -2 ರ ಪ್ರವೇಶ -66 ಅನ್ನು ಆಹ್ವಾನಿಸುವ ಮೂಲಕ ಸಮಗ್ರ ಶಾಸನವನ್ನು ಮಾಡಲು ರಾಜ್ಯ ವಿಧಾನಸಭೆಗೆ ಅಧಿಕಾರವಿದೆ. ರಾಜ್ಯದ ಹೊರಗೆ ಗಣಿಗಾರಿಕೆ ಕಾರ್ಯಾಚರಣೆಯನ್ನು ನಿಯಂತ್ರಿಸುವ ವಿಷಯವನ್ನು ಪ್ರವೇಶ -66, ಪಟ್ಟಿ -2 ರಲ್ಲಿ ಸೇರಿಸಲಾಗಿಲ್ಲ. ಪ್ರವೇಶ -66 ಎನ್ನುವುದು ಪಟ್ಟಿ- II ರಲ್ಲಿನ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಶುಲ್ಕವನ್ನು ನಿಗದಿಪಡಿಸುತ್ತದೆ. ಪಟ್ಟಿ -2 ರಲ್ಲಿನ ಪ್ರವೇಶ -23 ಗಣಿಗಳ ನಿಯಂತ್ರಣ ಮತ್ತು ಖನಿಜ ಅಭಿವೃದ್ಧಿಯ ಬಗ್ಗೆ ಒಕ್ಕೂಟದ ನಿಯಂತ್ರಣದಲ್ಲಿರುವ ನಿಯಂತ್ರಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಪಟ್ಟಿ -1 ರ ನಿಬಂಧನೆಗಳಿಗೆ ಒಳಪಟ್ಟಿದೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ವಿವರಿಸಿದೆ.

ಕೇಂದ್ರ ಸರ್ಕಾರವು 1957 ರ ಕಾಯಿದೆಯಿಂದ ಈ ಕ್ಷೇತ್ರವನ್ನು ಆಕ್ರಮಿಸಿಕೊಂಡಿದೆ. ಪಟ್ಟಿ- II ರ ಪ್ರವೇಶ -66 ರ ಪ್ರಕಾರ ಶುಲ್ಕವನ್ನು ವಿಧಿಸುವ ಮತ್ತು ರಾಜ್ಯ ವಿಧಾನಸಭೆಯಲ್ಲಿ ನಿಯಮಗಳನ್ನು ರಚಿಸುವ ಅಧಿಕಾರ ಹಾಗೂ ರಾಜ್ಯ ಶಾಸಕಾಂಗವು ನಿಯಮಗಳನ್ನು ರೂಪಿಸುವ ಮೂಲಕ ಅಂತಹ ಲೆವಿಗೆ ಅಧಿಕಾರ ನೀಡುವ ಮೂಲಕ ಕಾನೂನು ಜಾರಿಗೊಳಿಸಬಹುದಾದ, ಅಂತಹ ಯಾವುದೇ ಕಾನೂನು ಜಾರಿಗೆ ಬಂದಿಲ್ಲ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ.

ಇದು ಆಕ್ಷೇಪಾರ್ಹ ಉಪ-ನಿಯಮದಲ್ಲಿ ಒದಗಿಸಿದಂತೆ ಶುಲ್ಕ ವಿಧಿಸಲು ಅವಕಾಶ ನೀಡುವುದಿಲ್ಲ. ಇದಲ್ಲದೆ, ಈ ಪಟ್ಟಿಯ ಪ್ರವೇಶ -66 ರ ಪ್ರಕಾರ ರಾಜ್ಯ ಸರ್ಕಾರ ಯಾವುದೇ ಕಾನೂನನ್ನು ಜಾರಿಗೆ ತಂದಿಲ್ಲ

ಶುಲ್ಕ ಸಂಗ್ರಹಿಸುವ ಸಂಬಂಧ ಕಾನೂನು ರಚಿಸಿ ಆ ನಂತರ ನಿಯಮಕ್ಕೆ ತಿದ್ದುಪಡಿ ಮಾಡಿದ್ದಲ್ಲಿ ಹೈಕೋರ್ಟ್‌ ಅನೂರ್ಜಿತಗೊಳಿಸುತ್ತಿರಲಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಾನೂನು ಇಲಾಖೆ ನಡುವೆ ಸಮನ್ವಯತೆ ಇಲ್ಲ ಎಂಬುದನ್ನು ಹೈಕೋರ್ಟ್‌ ನೀಡಿರುವ ತೀರ್ಪು ನಿರೂಪಿಸಿದೆ.

ಇತರ ರಾಜ್ಯಗಳಲ್ಲಿ ಕಾನೂನುಬದ್ಧವಾಗಿ ಉತ್ಖನನ ಮಾಡಲ್ಪಟ್ಟ ಖನಿಜಗಳ ಮೇಲಿನ ಶುಲ್ಕವನ್ನು ವಿಧಿಸಲು ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಶಾಸಕಾಂಗ ಸಾಮರ್ಥ್ಯವಿಲ್ಲ. ಹಾಗಾಗಿ ರಾಜ್ಯ ಸರ್ಕಾರವು ಮಾಡಿದ ತಿದ್ದುಪಡಿಯು ಗಣಿ ಮತ್ತು ಖನಿಜಗಳ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಕ್ಕೆ ವಿರುದ್ದವಾಗಿದೆ ಹಾಗೂ ಸಂವಿಧಾನದ 301ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ 1994ರ ಕಲಂ 42(7)ಕ್ಕೆ ರಾಜ್ಯ ಸರ್ಕಾರವು 2020ರ ಜೂನ್‌ 30ರಂದು ಮಾಡಿದ್ದ ತಿದ್ದುಪಡಿಯು ಅನೂರ್ಜಿತವಾಗಿರುತ್ತದೆ ಹಾಗಾಗಿ ಈ ತಿದ್ದುಪಡಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠ ಅರ್ಜಿದಾರರ ಅರ್ಜಿಗಳನ್ನು ಪುರಸ್ಕರಿಸಿದೆ.

ಅಧಿಕೃತ ಪರವಾನಗಿಯೊಂದಿಗೆ ಇತರ ರಾಜ್ಯಗಳಿಂದ ಸಂಸ್ಕರಿಸಿದ ಕಟ್ಟಡ ಕಲ್ಲಿನ ವಸ್ತುಗಳನ್ನು ಇತರ ರಾಜ್ಯಗಳಿಂದ ಅಧಿಕೃತ ಪರವಾನಗಿಯೊಂದಿಗೆ ಕರ್ನಾಟಕ ರಾಜ್ಯಕ್ಕೆ ಸಾಗಿಸುವ ವ್ಯಕ್ತಿಯಿಂದ ಕಟ್ಟಡಕ್ಕೆ ಬಳಸುವ ಕಲ್ಲಿನ ವಸ್ತುಗಳನ್ನು ಸಾಗಿಸುವ ವ್ಯಕ್ತಿಯಿಂದ ಮೆಟ್ರಿಕ್ ಟನ್‌ಗೆ ರೂ .70 / – ವಸೂಲಿ ಮಾಡಲು ತಿದ್ದುಪಡಿ ತಂದಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts