Sunday | March 22, 2026 |

ಕಡಿಮೆ ತೆರಿಗೆ ; ಮೈತ್ರಿ ಸರ್ಕಾರದಲ್ಲಿ ಬೊಕ್ಕಸಕ್ಕೆ 1,502 ಕೋಟಿ ವರಮಾನ ನಷ್ಟ

Support THE-FILE

spot_img

ಬೆಂಗಳೂರು; ಮಾರಾಟಗಳ ಮೇಲಿನ ತೆರಿಗೆ, ರಾಜ್ಯ ಅಬಕಾರಿ, ಮೌಲ್ಯವರ್ಧಿತ ತೆರಿಗೆ, ಮುದ್ರಾಂಕಗಳು, ನೋಂದಣಿ ಶುಲ್ಕ, ಭೂ ಕಂದಾಯ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಹಿಂದಿನ ಸರ್ಕಾರದಲ್ಲಿ 1,502.73 ಕೋಟಿ ಮೊತ್ತದಷ್ಟು ವರಮಾನ ನಷ್ಟವಾಗಿತ್ತು.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು 2018-19ನೇ ಸಾಲಿನ ಆರ್ಥಿಕ ಅಶಿಸ್ತನ್ನು ತೆರೆದಿಟ್ಟಿದೆ.

2018-19ನೇ ಸಾಲಿನಲ್ಲಿ 32,466 ವರ್ತಕರಿಗೆ ಕಡಿಮೆ ತೆರಿಗೆಯನ್ನು ವಿಧಿಸಲಾಗಿತ್ತು. ನಮೂನೆ 240ರ ಪ್ರಕಾರ ಕಡಿಮೆ ತೆರಿಗೆ ಪಾವತಿಯಾಗಿತ್ತಲ್ಲದೆ, ಮದ್ಯದ ಮೇಲಿನ ಮಾರಾಟ ತೆರಿಗೆಯನ್ನೂ ವಿಧಿಸಿರಲಿಲ್ಲ. ಹಾಗೆಯೇ ಕಾಮಗಾರಿಗಳ ಗುತ್ತಿಗೆ ಸ್ವೀಕೃತಿ ಮೇಲೂ ತೆರಿಗೆ ವಿಧಿಸಿರಲಿಲ್ಲ/ಕಡಿಮೆ ತೆರಿಗೆ ವಿಧಿಸಿರುವುದು ಸೇರಿದಂತೆ ಒಟ್ಟು 6,109 ಪ್ರಕರಣಗಳಲ್ಲಿ 207.20 ಕೋಟಿ ಒಳಗೊಂಡಿತ್ತು.

ಈ ಪೈಕಿ ಮಾರಾಟಗಳ ಮೇಲಿನ ತೆರಿಗೆಯನ್ನು ಘೋಷಿಸಿಕೊಳ್ಳದ ಪ್ರಕರಣದಲ್ಲಿ 17.24 ಕೋಟಿ, ಮೌವತೆ 240ರ ಪ್ರಕಾರ ತೆರಿಗೆ ಪಾವತಿಸದಿದ್ದದ್ದು/ಕಡಿಮೆ ಪ್ರಮಾಣದಲ್ಲಿ ಪಾವತಿಸಿದ್ದದ್ದು 17.34 ಕೋಟಿ, ತೆರಿಗೆಯನ್ನು ಪಾವತಿಸದಿದ್ದದ್ದು 32.63 ಕೋಟಿ, ಮದ್ಯ ಮಾರಾಟದ ಮೇಲೆ ತೆರಿಗೆ ವಿಧಿಸದಿದ್ದು 28.48 ಕೋಟಿ, ದಂಡಗಳನ್ನು ವಿಧಿಸದಿದ್ದದ್ದು 42.97 ಕೋಟಿ, ಬಡ್ಡಿಯನ್ನು ವಿಧಿಸದಿದ್ದದ್ದು/ಕಡಿಮೆ ಪ್ರಮಾಣದಲ್ಲಿ ವಿಧಿಸದಿದ್ದದ್ದು 3.43 ಕೋಟಿ, ಖರೀದಿಗಳ ಮೇಲಿನ ತೆರಿಗೆ ಜಮೆಯನ್ನು ತಪ್ಪಾಗಿ/ಅಧಿಕ ಪ್ರಮಾಣದಲ್ಲಿ ಅನುಮತಿಸಿದ್ದು 20.38 ಕೋಟಿ, ತೆರಿಗೆ ಜಮೆಯನ್ನು ಅಧಿಕ ಪ್ರಮಾಣದಲ್ಲಿ ಮುಂದಿನ ತೆರಿಗೆ ಅವಧಿಗೆ ತೆಗೆದುಕೊಂಡು ಹೋಗಿದಿದ್ದದ್ದು 10.11 ಕೋಟಿ, ಇತರೆ ನಿಯಮಬಾಹಿರತೆಗಳು 20.82 ಕೋಟಿಯೂ ಒಳಗೊಂಡಿದೆ.

2 ಪಟ್ಟು ಅನರ್ಹ ಆರ್ಥಿಕ ಲಾಭ

ಜೂನ್‌ 2017ರ ಅವಧಿಯಲ್ಲಿ 381 ವರ್ತಕರು ಮರುಪಾವತಿಗೆ ಕೋರಿಕೆ ಸಲ್ಲಿಸಿದ್ದರು. ಕೋರಿಕೆ ಅಡಿಯಲ್ಲಿದ್ದ 31.13 ಕೋಟಿ ಮೊತ್ತವನ್ನು ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆಯನ್ನಾಗಿ ತೆಗೆದುಕೊಂಡಿದ್ದರು. ಇದು ಈ ಇಂದಿನ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮದ ಅಡಿಯಲ್ಲಿ ಮರು ಪಾವತಿಗಾಗಿ ಅರ್ಜಿ ಸಲ್ಲಿಸಿದಲ್ಲಿ ವರ್ತಕರಿಗೆ ಅನರ್ಹವಾದಂತಹ ಎರಡು ಪಟ್ಟು ಅರ್ಥಿಕ ಲಾಭ ಮಾಡಿಕೊಡುವ ಸಂಭಾವ್ಯ ಅಪಾಯವನ್ನೂ ಒಳಗೊಂಡಿದೆ ಎಂದು ಸಿಎಜಿ ವರದಿ ವಿವರಿಸಿದೆ.

15.36 ಕೋಟಿ ಮೊತ್ತದಷ್ಟು ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆ ಕೋರಿದ್ದ 80 ವರ್ತಕರು 2017ರ ಜನವರಿ 1ರಿಂದ ಜೂನ್‌ 30ರವರೆಗೆ ಎಲ್ಲಾ ತೆರಿಗೆ ಅವಧಿಗಳಿಗೆ ಸಲ್ಲಿಕೆಯನ್ನೇ ಸಲ್ಲಿಸಿರಲಿಲ್ಲ. ಅಲ್ಲದೆ ರಾಜ್ಯ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆ ಕೋರಿಕೆಗೆ ಅವರು ಅರ್ಹರಾಗಿರಲಿಲ್ಲ ಎಂದೂ ಸಿಎಜಿ ವರದಿ ತಿಳಿಸಿದೆ.

ಹಾಗೆಯೇ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಸಲ್ಲಿಕೆಗೆ ಸಂಬಂಧಿಸಿದಂತೆ 438 ವರ್ತಕರು ಮುಂದಿನ ತೆರಿಗೆ ಅವಧಿಗೆ ಮುಂದಕ್ಕೆ ತೆಗೆದುಕೊಂಡು ಹೋಗಲು 27.68 ಕೋಟಿ ಮೊತ್ತ ಲಭ್ಯವಿತ್ತು. ಆದರೆ ತೆರಿಗೆ ಜಮೆಗೆ ಪ್ರತಿಯಾಗಿ 54.52 ಕೋಟಿ ಮೊತ್ತದಷ್ಟು ರಾಜ್ಯ ಸಕರು ಮ್ತು ಸೇವೆಗಳ ಮೇಲಿನ ತೆರಿಗೆ ಮಧ್ಯಂತರ/ಪರಿವರ್ತನಾ ಕಾಲದ ತೆರಿಗೆ ಜಮೆ ಕೋರಿದ್ದರು. ಇದು 26.84 ಕೋಟಿ ಮೊತ್ತದಷ್ಟು ತೆರಿಗೆ ಜಮೆಯನ್ನು ಅಧಿಕ ಪ್ರಮಾಣದಲ್ಲಿ ಕೋರಿಕೆಗೆ ಪರಿಣಿಮಿಸಿತು ಎಂದು ವರದಿ ವಿವರಿಸಿದೆ.

Hot this week

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!