Thursday | May 14, 2026 |

ವಾಷಿಂಗ್‌ ಮೆಷಿನ್‌, ಚಪಾತಿ ಯಂತ್ರ ಖರೀದಿಯಲ್ಲಿ ಅಕ್ರಮ; ಅನಧಿಕೃತ ಏಜೆನ್ಸಿಗೆ 10.59 ಕೋಟಿ ಹೆಚ್ಚುವರಿ ಪಾವತಿ

ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 270 ವಿದ್ಯಾರ್ಥಿ ನಿಲಯಗಳಿಗೆ ವಾಷಿಂಗ್‌ ಮೆಷಿನ್‌ ಮತ್ತು ಚಪಾತಿ ಮಾಡುವ ಯಂತ್ರಗಳನ್ನು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಮತ್ತು ಮೂಲತಃ ತಯಾರಕರಲ್ಲದ ಹಾಗೂ ಅನಧಿಕೃತ ಏಜೆನ್ಸಿಗಳಿಂದ ಖರೀದಿಸಿದ್ದ ಕಿಯೋನಿಕ್ಸ್‌ ಸಂಸ್ಥೆಯು ಸರ್ಕಾರಕ್ಕೆ 11.13 ಕೊಟಿ ರು. ಮೊತ್ತಕ್ಕೆ ಮಾರಾಟ ಮಾಡಿತ್ತು. ಉಪಕರಣಗಳನ್ನು ಸರಬರಾಜು ಮಾಡಿದ್ದ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವ ಎಂಬ ಪ್ರಕರಣವನ್ನು ಸಿಎಜಿ ವರದಿಯು ಹೊರಗೆಡವಿದೆ.

 

ಹಿಂದಿನ ಸರ್ಕಾರದ ಅವಧಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ ದಿಂಬು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು  ಬಿಜೆಪಿ ಪಕ್ಷವು, ಇದೀಗ ತನ್ನದೇ ಪಕ್ಷದ ಸರ್ಕಾರದ ಆಡಳಿತದಲ್ಲಿ ವಾಷಿಂಗ್‌ ಮೆಷಿನ್‌ ಮತ್ತು ಚಪಾತಿ ಮಾಡುವ ಯಂತ್ರಗಳ ಖರೀದಿಯಲ್ಲೂ ಅಕ್ರಮ ಎಸಗಿರುವುದು ಮುನ್ನೆಲೆಗೆ ಬಂದಿದೆ.

 

ಸಿಎಜಿ ನೀಡಿರುವ ವರದಿ ಪ್ರತಿ

 

ಈ ಪ್ರಕರಣ ಕುರಿತು ಇಲಾಖೆಯು ಸ್ಟಾರ್‌ ಫಿಶ್‌ ವಾಷಿಂಗ್‌ ಮೆಷಿನ್‌ಗೆ ಸಮನಾಗಿ ಯಂತ್ರವೊಂದಕ್ಕೆ 4,55,900 ರು.ನಂತೆ ಬಿಲ್‌ ಮಾಡುವ ಮೂಲಕ ವಿಶ್ವಾಸ ಉಲ್ಲಂಘನೆ ಮಾಡಿದೆ ಮತ್ತು ಟೆಂಡರ್‌ ಷರತ್ತುಗಳನ್ನು ಉಲ್ಲಂಘನೆ ಮಾಡಿದೆ. ಹೆಚ್ಚುವರಿಯಾದ 7.77 ಕೋಟಿ ಮೊತ್ತ ವಸೂಲಾತಿಗಾಗಿ ವರ್ತಕರಿಗೆ ನೋಟೀಸ್‌ ನೀಡಲಾಗಿದೆ. ಚಪಾತಿ ತಯಾರಿಸುವ ಸಾಧನಕ್ಕೆ ಯೂನಿಟ್‌ ಒಂದಕ್ಕೆ 2.20 ಲಕ್ಷ ಹಾಗೂ ಜಿಎಸ್‌ಟಿ ಸೇರಿ ಒಟ್ಟಾರೆ 3,64,325 ರು. ಮಾತ್ರ ಪಾವತಿಸಲಾಗಿದೆಯೇ ವಿನಃ ಹೆಚ್ಚುವರಿ ದರದಲ್ಲಿ ಖರೀದಿಸಿಲ್ಲ ಎಂದು ಉತ್ತರ ಮತ್ತು ಸಮಜಾಯಿಷಿ ನೀಡಿತ್ತು.

 

ಆದರೆ ಇದನ್ನು ಒಪ್ಪದ ಸಿಎಜಿಯು ‘ಈ ಪ್ರಕರಣದಲ್ಲಿ ಖರೀದಿಸಲಾಗಿರುವ ಸರಕುಗಳು ಮಾಹಿತಿ ತಂತ್ರಜ್ಞಾನೇತರ ಉತ್ಪನ್ನಗಳು ಆಗಿರುವುದರಿಂದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳಿಗೆ ಮಾತ್ರ ಅನ್ವಯಗೊಳ್ಳುತ್ತಿದ್ದ 4(ಜಿ) ವಿನಾಯಿತಿಯನ್ನು ಕಿಯೋನಿಕ್ಸ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ದುರುಪಯೋಗಪಡಿಸಿಕೊಂಡಿದೆ. ಉತ್ತರದಾಯಿತ್ವ/ಜವಾಬ್ದಾರಿಯನ್ನು ನಿಗದಿಪಡಿಸುವ ಸಲುವಾಗಿ ಹಾಗೂ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಾತಿ ಮಾಡಬೇಕು. ಇದಕ್ಕಾಗಿ ಸರ್ಕಾರವು ಸವಿವರವಾದ ತನಿಖೆ ನಡೆಸುವ ಅಗತ್ಯವಿದೆ,’ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಿಯೋನಿಕ್ಸ್‌ ಮೂಲಕ 4(ಜಿ) ವಿನಾಯಿತಿ ಉಲ್ಲೇಖಿಸಿ ಉಪಕರಣಗಳನ್ನು ಖರೀದಿ ಮಾಡಿರುವುದು ಸಹ ನಿಯಮಬಾಹಿರತೆಯಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ದರಗಳಿಗಿಂತ ಮೂರದಿಂದ ನಾಲ್ಕು ಪಟ್ಟು ಅಧಿಕ ದರದಲ್ಲಿ ಖರೀದಿ ಮಾಡಿರುವ ಕಾರಣ ಇದೊಂದೇ ಪ್ರಕರಣದಲ್ಲಿ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರು. ಹೆಚ್ಚುವರಿಯಾಗಿ ಪಾವತಿಸಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

 

ವಿದ್ಯಾರ್ಥಿ ನಿಲಯಗಳಿಗೆ 15 ಕೆ ಜಿ ಸಾಮರ್ಥ್ಯದ 270 ವಾಷಿಂಗ್‌ ಮೆಷಿನ್‌ಗಳನ್ನು ಖರೀದಿಸಲು ಕಿಯೋನಿಕ್ಸ್‌ ಮೂಲಕ 15 ಕೋಟಿ ಮೊತ್ತಕ್ಕೆ ದರಪಟ್ಟಿ ಮತ್ತು ಪ್ರಸ್ತಾವನೆ ಸಲ್ಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರ್ಕಾರವು ನಿರ್ದೇಶಿಸಿತ್ತು. ಅಲ್ಲದೇ ಅರೆ-ಸ್ವಯಂ ಚಾಲಿತ ಚಪಾತಿ ಮಾಡುವ ಯಂತ್ರಗಳನ್ನು ವಿದ್ಯಾರ್ಥಿ ನಿಲಯಗಳಿಗೆ ಖರೀದಿ ಮಾಡಲು 2020ರ ಮಾರ್ಚ್‌ನಲ್ಲಿ ಸರ್ಕಾರವು ಇಲಾಖೆಗೆ  ನಿರ್ದೇಶಿಸಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ಆದರೆ ಅರೆ-ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳಿಗೆ ಸಂಬಂಧಿಸಿದಂತೆ ಕಿಯೋನಿಕ್ಸ್‌ ಮೂಲಕ ದರ ಪಟ್ಟಿ ಪಡೆದುಕೊಳ್ಳಲು ಸರ್ಕಾರದಿಂದ ನೇರವಾಗಿ ಯಾವುದೇ ಆದೇಶಗಳಿರಲಿಲ್ಲ. ಆಧರೂ ವಾಷಿಂಗ್‌ ಮೆಷಿನ್‌ ಜೊತೆಗೆ ಚಪಾತಿ ಮಾಡುವ ಯಂತ್ರಗಳ ಸರಬರಾಜಿಗೂ ಆದೇಶ ನೀಡಲಾಗಿತ್ತು ಎಂದು ಸಿಎಜಿ ವರದಿಯಲ್ಲಿ  ವಿವರಿಸಲಾಗಿದೆ.

 

ಸಿದ್ದಾರ್ಥ ಏಜೆನ್ಸೀಸ್‌ ಮೂಲಕ ವಾಷಿಂಗ್‌ ಮೆಷಿನ್‌, ನ್ಯೂಜೆನ್‌ ಸೆಕ್ಯುರಿಟಿ ಸಲ್ಯೂಷನ್ಸ್‌ ಮೂಲಕ ಚಪಾತಿ ಮಾಡುವ ಯಂತ್ರಗಳನ್ನು ಖರೀದಿಸಿಲಾಗಿತ್ತು. ಆದರೆ ಈ ಎರಡೂ ಏಜೆನ್ಸಿಗಳೂ ಮೂಲತಃ ಉಪಕರಣಗಳ ತಯಾರಕ ಸಂಸ್ಥೆಗಳಾಗಿರಲಿಲ್ಲ ಮತ್ತು ಅಧಿಕೃತವಾಗಿ ಮನ್ನಣೆ ಪಡೆದಿರುವ ವರ್ತಕರೂ ಆಗಿರಲಿಲ್ಲ. ಹೀಗಾಗಿ ಇಂತಹ ಸಂಸ್ಥೆಗಳನ್ನು ಅನುಮೋದಿತ/ಅಧಿಕೃತ ಪಟ್ಟಿಯಲ್ಲಿ ಸೇರಿಸರಬಾರದಾಗಿತ್ತು. ಆದರೆ ಇಲಾಖೆ ಮತ್ತು ಕಿಯೋನಿಕ್ಸ್‌ ಈ ಎರಡೂ ಸಂಸ್ಥೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸುವ ಮೂಲಕ ಆರ್‌ಎಫ್‌ಪಿ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು ಎಂಬುದನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.

 

ಸಾಮಗ್ರಿಗಳನ್ನು ನೇರವಾಗಿ ವಿದ್ಯಾರ್ಥಿನಿಲಯಗಳಿಗೆ ಜುಲೈ 2020 ಹಾಗೂ ಜುಲೈ 2021ರ ನಡುವೆ ಸರಬರಾಜು ಮಾಡಲಾಗಿತ್ತು. ಕಿಯೋನಿಕ್ಸ್‌ ಸಂಸ್ಥೆಯು ವಿದ್ಯಾರ್ಥಿ ನಿಲಯಗಳ ಅಧಿಕಾರಿಗಳಿಂದ ಸಾಮಗ್ರಿ ವಿತರಣೆ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ನಂತರ 15.52 ಕೋಟಿ ರು.ಗಳನ್ನು ತನ್ನ ಸಹಭಾಗಿ ಸಂಸ್ಥೆಗಳಿಗೆ ಬಿಡುಗಡೆ ಮಾಡಿತ್ತು. ಇದನ್ನು ಪರಿಶೋಧನೆಗೆ ಒಳಪಡಿಸಿದ್ದ ಸಿಎಜಿ ನಿಯಮಬಾಹಿರ ಕ್ರಮಗಳನ್ನು ಮತ್ತು ನಷ್ಟವಾಗಿರುವ ಬಗೆಯನ್ನು ವರದಿಯಲ್ಲಿ ತೆರೆದಿಟ್ಟಿದೆ.

 

ವಾಷಿಂಗ್‌ ಮೆಷಿನ್‌ಗಳು ಹಾಗೂ ಚಪಾತಿ ಮಾಡುವ ಸಾಧನಗಳು ಗ್ರಾಹಕರು ಉಪಯೋಗಿಸುವ ಉತ್ಪನ್ನಗಳು. ಅವುಗಳು ಮಾರುಕಟ್ಟೆಯಲ್ಲಿ ಸಿದ್ಧವಾಗಿ ಲಭ್ಯವಿರುತ್ತವೆ. ಅಲ್ಲದೆ ದರಗಳು ತಯಾರಕರು/ಅಧಿಕೃತ ವರ್ತಕರುಗಳ ಜಾಲತಾಣಗಳಲ್ಲಿ (2022ರ ಜನವರಿಯಲ್ಲಿದ್ದಂತೆ) ಲಭ್ಯವಿರುತ್ತವೆ. ಆದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 270 ವಾಷಿಂಗ್‌ ಮೆಷಿನ್ ಮತ್ತು 82 ಚಪಾತಿ ಮಾಡುವ ಸಾಧನಗಳನ್ನು ಸರಬರಾಜು ಮಾಡುವ ಸಲುವಾಗಿ 16.30 ಕೋಟಿ ಮೊತ್ತವನ್ನು ಕಿಯೋನಿಕ್ಸ್‌ಗೆ ಬಿಡುಗಡೆ ಮಾಡಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಆದರೆ ‘ಕಿಯೋನಿಕ್ಸ್‌ ಸಂಸ್ಥೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿದ್ದ ದರಗಳು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಮೂರರಿಂದ ನಾಲ್ಕು ಪಟ್ಟು ಅಧಿಕವಾಗಿದ್ದವು. ಅಲ್ಲದೇ ಕಿಯೋನಿಕ್ಸ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ಉತ್ಪನ್ನಗಳನ್ನು ಯಾವ ದರಗಳಲ್ಲಿ ಖರೀದಿಸಬಹುದು ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಯಾಔಉದೇ ಪ್ರಯತ್ನಗಳನ್ನೂ ಮಾಡಿರಲಿಲ್ಲ. ಇದು ಒಟ್ಟು 10.59 ಕೋಟಿ ನಷ್ಟಕ್ಕೆ ಕಾರಣವಾಗಿತ್ತು,’ ಎಂಬುದನ್ನು ಸಿಎಜಿ ವರದಿಯು ಪತ್ತೆ ಹಚ್ಚಿದೆ.

 

ಏಜೆನ್ಸಿಗಳಿಗೆ 8.97 ಕೋಟಿ ಹೆಚ್ಚುವರಿ ಲಾಭ

 

ಎಲ್‌ ಜಿ ಕಂಪನಿಯ ವಾಷಿಂಗ್‌ ಮೆಷಿನ್‌ವೊಂದಕ್ಕೆ ಮಾರುಕಟ್ಟೆಯಲ್ಲಿ 1.00 ಲಕ್ಷ ರು. ಇದ್ದರೆ ಕಿಯೋನಿಕ್ಸ್‌ ಸಂಸ್ಥೆಯು 4.56 ಲಕ್ಷ ರು. ದರದಲ್ಲಿ ಖರೀದಿಸಿತ್ತು. ಇದು 3.56 ಲಕ್ಷವನ್ನು ಹೆಚ್ಚುವರಿಯಾಗಿ ಕಂಪನಿಗೆ ಲಾಭ ಮಾಡಿಕೊಟ್ಟಿತ್ತು. ಅದೇ ರೀತಿ ಸ್ಟಾರ್‌ಫಿಶ್‌ ವಾಷಿಂಗ್‌ ಮೆಷಿನ್‌ಗೆ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ 2.70 ಲಕ್ಷ ರು ಇದ್ದರೆ ಕಿಯೋನಿಕ್ಸ್‌ ಸಂಸ್ಥೆಯು 4.56 ಲಕ್ಷ ರು. ದರದಲ್ಲಿ ಖರೀದಿಸಿತ್ತು. ಇದು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 1.86 ಲಕ್ಷ ರು ಹೆಚ್ಚುವರಿಯಾಗಿತ್ತು.

 

ಚಪಾತಿ ಮಾಡುವ ಯಂತ್ರವೊಂದಕ್ಕೆ ಮಾರುಕಟ್ಟೆಯಲ್ಲಿ 1.20 ಲಕ್ಷ ರು ಇದ್ದರೆ ಕಿಯೋನಿಕ್ಸ್‌ ಸಂಸ್ಥೆಯು 3.09 ಲಕ್ಷ ರು.ಗೆ ಖರೀದಿಸಿ ಸರಬರಾಜು ಮಾಡಿತ್ತು. ಇದು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 1.89 ಲಕ್ಷ ರು. ಹೆಚ್ಚುವರಿಯಾಗಿತ್ತು. ಜಿಎಸ್‌ಟಿ 1.61 ಕೋಟಿ ರು ಸೇರಿ ಒಟ್ಟಾರೆ 10.59 ಕೋಟಿ ಹೆಚ್ಚುವರಿಯಾಗಿ ಪಾವತಿಸಲಾಗಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ಇದಷ್ಟೇ ಅಲ್ಲ, ವಾಷಿಂಗ್‌ ಮೆಷಿನ್‌ಗಳ ಬ್ರ್ಯಾಂಡ್‌ ಮತ್ತು ಮಾಡಲ್‌ ವಿವರಗಳನ್ನು ತಿಳಿಸಬೇಕಿದ್ದ ಕಿಯೋನಿಕ್ಸ್‌ ಸಂಸ್ಥೆಯು ಇದಾವುದನ್ನೂ ದಾಖಲೆಗಳಲ್ಲಿ ಒದಗಿಸದೆಯೇ ಷರತ್ತುಗಳನ್ನು ಉಲ್ಲಂಘಿಸಿತ್ತು. ಸಿದ್ದಾರ್ಥ ಏಜೆನ್ಸೀಸ್‌ ನೀಡಿದ್ದ ಇನ್‌ವಾಯ್ಸ್‌ಗಳು ಹಾಗೂ ವಿದ್ಯಾರ್ಥಿ ನಿಲಯಗಳಿಂದ ಪಡೆದುಕೊಂಡಿರುವ ದಾಸ್ತಾನು ಪ್ರಮಾಣ ಪತ್ರಗಳು ಬ್ರ್ಯಾಂಡ್‌ ಮತ್ತು ಮಾಡೆಲ್‌ ವಿವರಗಳು ಇರಲಿಲ್ಲ.

 

ಹಾಗೆಯೇ 4(ಜಿ) ವಿನಾಯಿತಿ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಷರತ್ತುಗಳ ಪ್ರಕಾರ ಕಿಯೋನಿಕ್ಸ್‌ ಸಿಬ್ಬಂದಿ ಸರಬರಾಜಿಗೆ ಮಾತ್ರ ಶೇ.5ರವರೆಗೆ ಸೇವಾ ಶುಲ್ಕ ಪಡೆದುಕೊಳ್ಳಲು ಅನುಮತಿ ಇದೆ. ಆದರೂ ಕಿಯೋನಿಕ್ಸ್‌ ಸಂಸ್ಥೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರಕುಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಷರತ್ತುಗಳನ್ನು ಉಲ್ಲಂಘಿಸಿ ಶೇ. 3 ಅಥವಾ ಶೇ. 5ರಂತೆ ಒಟ್ಟು 54.49 ಲಕ್ಷ ರು.ಗಳನ್ನು (ವಾಷಿಂಗ್‌ ಮೆಷಿನ್‌ಗಳಿಗೆ 38.77 ಲಕ್ಷ, ಚಪಾತಿ ಮಾಡುವ ಸಾಧನಗಳಿಗೆ 15.72 ಲಕ್ಷ) ಸೇವಾ ಶುಲ್ಕ ವಸೂಲು ಮಾಡಿತ್ತು.

Hot this week

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...
Please Scan to make Your Contribution

Topics

ಕೋಟ್ಯಂತರ ರು ಮೌಲ್ಯದ ನಿವೇಶನ ನಿಯಮಬಾಹಿರ ಮಂಜೂರು, ಅಕ್ರಮ ಲಾಭ; ಕೆಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಅನುಮತಿ

ಬೆಂಗಳೂರು; ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿ ಖಾಸಗಿಯವರಿಗೆ...

ರಾಮಕೃಷ್ಣ ಹೆಗಡೆ ಕುಟುಂಬಕ್ಕೆ ಖರಾಬು ಗುಂಡು ತೋಪು ಜಮೀನು ಮಂಜೂರಿಗೆ ಕೋರಿಕೆ; ಸಿದ್ದು ಭೇಟಿ ಬೆನ್ನಲ್ಲೇ ಬಹಿರಂಗವಾದ ಪತ್ರ

ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು...

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...

ನಕಲಿ ಶಿಕ್ಷಕರಿಗೆ ವೇತನ ಪಾವತಿ; ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಬಿಟ್ಟ ಸರ್ಕಾರ!

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ  2011ರಿಂದ 2014ರವರೆಗೆ ಹೆಚ್‌ಆರ್‍ಎಂಎಸ್‌ ಮೂಲಕ ನಕಲಿ ಶಿಕ್ಷಕರ...

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

Related Articles

Popular Categories

error: Content is protected !!